AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Heavy downpour in Yadgir: ಕೇವಲ ವಾರದ ಹಿಂದೆ ಬತ್ತಿಹೋಗಿದ್ದ ಭೀಮಾನದಿಯಲ್ಲಿ ಭಾರೀ ಪ್ರಮಾಣದ ನೀರು, ರೈತರ ಮುಖದಲ್ಲಿ ಗೆಲುವು

Heavy downpour in Yadgir: ಕೇವಲ ವಾರದ ಹಿಂದೆ ಬತ್ತಿಹೋಗಿದ್ದ ಭೀಮಾನದಿಯಲ್ಲಿ ಭಾರೀ ಪ್ರಮಾಣದ ನೀರು, ರೈತರ ಮುಖದಲ್ಲಿ ಗೆಲುವು

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Jul 22, 2023 | 12:49 PM

Share

ಜಿಲ್ಲೆಯಲ್ಲಿ ಕಳೆದ 5-6 ದಿನಗಳಿಂದ ಸತತವಾಗಿ ಮಳೆಯಾಗುತ್ತಿರುವುದರಿಂದ ನದಿಯಲ್ಲಿ ಭಾರೀ ಪ್ರಮಾಣದ ನೀರು ಹರಿದು ಬಂದಿದೆ.

ಯಾದಗಿರಿ: ನಿಮಗೆ ನೆನಪಿರಬಹುದು, ಕೇವಲ ಒಂದು ವಾರದ ಹಿಂದೆ ನಗರದ ಹೊರಭಾಗದಿಂದ ಹರಿಯುವ ಭೀಮಾ ನದಿಯ (Bhima River) ಬತ್ತಿದ ಒಡಲಿನ ವಿಡಿಯೋ ತೋರಿಸಿದ್ದೆವು. ಮಾನ್ಸೂನ್ (monsoon ) ವಿಳಂಬಗೊಂಡಿದ್ದರಿಂದ ರೈತ ಸಮುದಾಯ ಕಂಗಾಲಾಗಿ ಹತಾಷೆಗೊಂಡಿತ್ತು. ಅದರೆ, ಇವತ್ತು ಭೀಮೆ ಉಕ್ಕಿ ಹರಿಯುತ್ತಿದ್ದಾಳೆ. ನದಿ ತೀರಕ್ಕಿದ್ದ ಕಂಗಾಲೇಶ್ವರ ಮತ್ತು ವೀರಾಂಜನೇಯ ದೇವಸ್ಥಾನಗಳು ಹೆಚ್ಚುಕಡಿಮೆ ಜಲಾವೃತಗೊಂಡಿವೆ. ಹಾಗಾಗೇ, ಭಕ್ತರು ನದಿ ದಡಕ್ಕೆ ಕೂತು ಪೂಜೆ ಮಾಡುವ ಪರಿಸ್ಥಿತಿ ತಲೆದೋರಿದೆ. ಕಲಬುರಗಿ ಜಿಲ್ಲೆಯಲ್ಲಿ ಹರಿಯುಬ ಕಾಗಿನಾ ನದಿನೀರು (Kagina River water) ಕೂಡ ಭೀಮಾನದಿ ಬಂದು ಸೇರುತ್ತದೆ. ಜಿಲ್ಲೆಯಲ್ಲಿ ಕಳೆದ 5-6 ದಿನಗಳಿಂದ ಸತತವಾಗಿ ಮಳೆಯಾಗಿತ್ತಿರುವುದರಿಂದ ನದಿಯಲ್ಲಿ ಭಾರೀ ಪ್ರಮಾಣದ ನೀರು ಹರಿದು ಬಂದಿದೆ ಎಂದು ಟಿವಿ9 ಕನ್ನಡ ವಾಹಿನಿಯ ಯಾದಗಿರಿ ವರದಿಗಾರ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.