Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ

ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ

ಮಂಜುನಾಥ ಸಿ.
|

Updated on: Nov 26, 2024 | 8:00 PM

Bigg Boss Kannada: ಬಿಗ್​ಬಾಸ್​ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಶೋಭಾ ಶೆಟ್ಟಿ ಮತ್ತು ರಜತ್​ ಇಬ್ಬರಲ್ಲಿ, ರಜತ್ ಕೆಲವೇ ದಿನಗಳಲ್ಲಿ ಗಮನ ಸೆಳೆದಿದ್ದಾರೆ. ಆದರೆ ಶೋಭಾ ಶೆಟ್ಟಿ ಆರಂಭದಲ್ಲಿ ಗಮನ ಸೆಳೆದರೂ ಆ ನಂತರ ಯಾಕೋ ಮಂಕಾಗಿದ್ದಾರೆ.

ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಶೋಭಾ ಶೆಟ್ಟಿ ಈ ಹಿಂದೆ ತೆಲುಗು ಬಿಗ್​ಬಾಸ್​ನಲ್ಲಿ ಆಡಿ ಬಂದಿದ್ದಾರೆ. ಅವರಿಗೆ ಬಿಗ್​ಬಾಸ್​ ಆಟದ ಅನುಭವ ಇದೆ. ಆದರೆ ಶೋಭಾ ಶೆಟ್ಟಿ ಮೊದಲ ಕೆಲ ದಿನ ಫುಲ್ ಜೋಶ್​ನಲ್ಲಿದ್ದರಾದರೂ ಆ ನಂತರ ಯಾಕೋ ಮಂಕಾಗಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಈ ವಾರ ತುಸು ಮಜವಾದ ಟಾಸ್ಕ್​ ನೀಡಲಾಗಿತ್ತು. ಉಗ್ರಂ ಮಂಜು ಮಹಾಪ್ರಭು ಆಗಿದ್ದು, ಅವರ ಎದುರೇ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಈ ಸಂದರ್ಭದಲ್ಲಿ ಹನುಮಂತು ಶೋಭಾ ಶೆಟ್ಟಿಯ ಹೆಸರು ತೆಗೆದುಕೊಂಡು ಅದಕ್ಕೆ ಕಾರಣ ನೀಡಿದ್ದಾರೆ. ಆದರೆ ಇದಕ್ಕೆ ಶೋಭಾ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಶೋಭಾ ಅನ್ನು ಉಗ್ರಂ ಮಂಜು ತಡೆಯಲು ಹೋದಾಗ, ಮಹಾಪ್ರಭು ಆಗಿರುವ ಮಂಜು ಅವರ ಆಜ್ಞೆಯನ್ನು ಶೋಭಾ ಧಿಕ್ಕರಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ