‘ನನ್ನಿಂದ ತನಿಷಾನ ದೂರ ಮಾಡಿದ ಪಾಪಿ ಇವನು’: ಕಾರ್ತಿಕ್​ ಕಡೆ ಕೈ ತೋರಿಸಿದ ವರ್ತೂರು

ಕಾರ್ತಿಕ್​ ನಾಮಿನೇಟ್​ ಮಾಡಿದ್ದರಿಂದಲೇ ತನಿಷಾ ಕುಪ್ಪಂಡ ಎಲಿಮಿನೇಟ್​ ಆಗಬೇಕಾಯಿತು. ಹಾಗಾಗಿ ‘ನನ್ನಿಂದ ಬೆಂಕಿಯನ್ನು ದೂರ ಮಾಡಿದ ಪಾಪಿ ಇವನು’ ಎಂದು ಕಾರ್ತಿಕ್​ ಕಡೆಗೆ ವರ್ತೂರು ಸಂತೋಷ್​ ಕೈ ತೋರಿಸಿದ್ದಾರೆ. ‘ಜಾಸ್ತಿ ದಿನ ಏನೂ ಇಲ್ಲ. ಮತ್ತೆ ಹೋಗಿ ಸೇರಿಕೊಳ್ಳಬಹುದು ಬಿಡು’ ಎಂದು ತುಕಾಲಿ ಸಂತೋಷ್​ ಅವರು ಹೇಳಿದ್ದಾರೆ.

‘ನನ್ನಿಂದ ತನಿಷಾನ ದೂರ ಮಾಡಿದ ಪಾಪಿ ಇವನು’: ಕಾರ್ತಿಕ್​ ಕಡೆ ಕೈ ತೋರಿಸಿದ ವರ್ತೂರು
|

Updated on: Jan 19, 2024 | 9:04 PM

ಬಿಗ್​ ಬಾಸ್​ ಮನೆಯಲ್ಲಿ ತನಿಷಾ ಕುಪ್ಪಂಡ (Tanisha Kuppanda) ಅವರನ್ನು ಎಲ್ಲರೂ ಬೆಂಕಿ ಎಂದು ಕರೆಯುತ್ತಿದ್ದರು. ಕೊನೇ ಹಂತದಲ್ಲಿ ತನಿಷಾ ಅವರು ಬಿಗ್​ ಬಾಸ್ (Bigg Boss Kannada)​ ಆಟದಿಂದ ಎಲಿಮಿನೇಟ್​ ಆಗಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ದೊಡ್ಮನೆಯಲ್ಲಿ ಇರುವ ವರ್ತೂರು ಸಂತೋಷ್​ ಅವರಿಗೂ ಈ ಬಗ್ಗೆ ನೋವಾಗಿದೆ. ಇದೇ ವಿಚಾರ ಇಟ್ಟುಕೊಂಡು ಬಿಗ್​ ಬಾಸ್​ ಮನೆಯಲ್ಲಿ ವರ್ತೂರು ಸಂತೋಷ್​ (Varthur Santhosh), ತುಕಾಲಿ ಸಂತೋಷ್​ ಹಾಗೂ ಕಾರ್ತಿಕ್​ ಮಹೇಶ್​ ಚರ್ಚೆ ಮಾಡಿದ್ದಾರೆ. ಕಾರ್ತಿಕ್​ ನಾಮಿನೇಟ್​ ಮಾಡಿದ್ದರಿಂದಲೇ ತನಿಷಾ ಕುಪ್ಪಂಡ ಅವರು ಎಲಿಮಿನೇಟ್​ ಆಗಬೇಕಾಯಿತು. ಹಾಗಾಗಿ ‘ನನ್ನಿಂದ ಬೆಂಕಿಯನ್ನು ದೂರ ಮಾಡಿದ ಪಾಪಿ ಇವನು’ ಎಂದು ಕಾರ್ತಿಕ್​ ಕಡೆಗೆ ವರ್ತೂರು ಸಂತೋಷ್​ ಕೈ ತೋರಿಸಿದ್ದಾರೆ. ‘ಜಾಸ್ತಿ ದಿನ ಏನೂ ಇಲ್ಲ. ಮತ್ತೆ ಹೋಗಿ ಸೇರಿಕೊಳ್ಳಬಹುದು ಬಿಡು’ ಎಂದು ತುಕಾಲಿ ಸಂತೋಷ್​ ಅವರು ಹೇಳಿದ್ದಾರೆ. ‘ಕಲರ್ಸ್​ ಕನ್ನಡ’ದಲ್ಲಿ ಜನವರಿ 19ರಂದು ಈ ಸಂಚಿಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕ ಉಚಿತವಾಗಿ ಲೈವ್​ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us