ಬಿಜೆಪಿ ಮುಖಂಡರು, ಪಾಲಿಕೆ ಅಧಿಕಾರಿ ವಿರುದ್ಧ ಮರಗಳ್ಳತನ ಆರೋಪ: ಕಾಂಗ್ರೆಸ್ನಿಂದ ದೂರು
ಮಂಗಳೂರಿನ ಸೂರತ್ಕಲ್ ಬಳಿಯ ಮಹಾನಗರ ಪಾಲಿಕೆಯ STP ಜಾಗದಲ್ಲಿ ಕಾಂಪೌಂಡ್ ನಿರ್ಮಾಣದ ನೆಪದಲ್ಲಿ ಲಕ್ಷಾಂತರ ರೂಪಾಯಿ ಮರಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಯಾವುದೇ ಟೆಂಡರ್ ಇಲ್ಲದೆ ನಡೆದ ಈ ಕಾಮಗಾರಿಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಶಾಮೀಲು ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆಗೆ ಆಗ್ರಹಿಸಲಾಗಿದೆ.
ಮಂಗಳೂರು, ಆಗಸ್ಟ್ 27: ಮಂಗಳೂರು ಹೊರವಲಯದ ಸುರತ್ಕಲ್ ಬಳಿ ಮರಗಳ ಮಾರಣಹೋಮ ನಡೆದಿದ್ದು, ಸುರತ್ಕಲ್ ಮಾಧವನಗರದ ಪಾಲಿಕೆಯ STP ಜಾಗದಲ್ಲಿದ್ದ ವಿವಿಧ ಜಾತಿಯ ಮರ ಕಡಿದು ಸಾಗಾಟ ಮಾಡಲಾಗಿದೆ. ಸಾಗುವಾನಿ, ಹೆಬ್ಬಲಸು, ಹಲಸು ಸೇರಿ ವಿವಿಧ ಜಾತಿ ಮರಗಳ ಮಾರಾಟ ಸಂಬಂಧ ಬಿಜೆಪಿ ಮುಖಂಡರು, ಪಾಲಿಕೆ ಅಧಿಕಾರಿ ವಿರುದ್ಧ ಕಾಂಗ್ರೆಸ್ ಮರಗಳ್ಳತನ ಆರೋಪ ಮಾಡಿದೆ. ಕಾಂಪೌಂಡ್ ನಿರ್ಮಾಣ ನೆಪದಲ್ಲಿ ಮರಗಳ ಮಾರಣಹೋಮ ಮಾಡಲಾಗಿದೆ ಎಂದು ದೂರು ನೀಡಲಾಗಿದೆ. ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ವೇತಾ ಮತ್ತು ಬಿಜೆಪಿ ಮುಖಂಡ ಕಂ ಕಂಟ್ರಾಕ್ಟರ್ ಪುಷ್ಪರಾಜ್ ವಿರುದ್ಧಸಿಎಂ, ಅರಣ್ಯ ಸಚಿವ, ಅರಣ್ಯಾಧಿಕಾರಿ, ಪೊಲೀಸರಿಗೆ ಕಂಪ್ಲೇಂಟ್ ನೀಡಿದೆ. ಮಂಗಳೂರು ಪಾಲಿಕೆಯಿಂದಲೂ ಕೂಡ RFOಗೆ ದೂರು ನೀಡಲಾಗಿದ್ದು, ಕದ್ದು ಮಾರಿದ್ದ ಶೇ.50ರಷ್ಟು ಮರವನ್ನು ಇಲಾಖೆ ವಶಪಡಿಸಿಕೊಂಡಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
