ಶಿಕ್ಷಕಿಯಿಂದ ಹಿಂದೂ ಧರ್ಮ ಅವಹೇಳನ ಪ್ರಕರಣ; ತಮ್ಮ ವಿರುದ್ಧ ಯಾಕೆ ಎಫ್ಐಆರ್ ಎಂದ ಬಿಜೆಪಿ ಶಾಸಕರು

ಮಂಗಳೂರು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಬಿಜೆಪಿ ಶಾಸಕರು ಶಾಲೆಯ ಬಳಿ ಮಕ್ಕಳ ಮನಸ್ಸಿನಲ್ಲಿ ಕೋಮು ಭಾವನೆ ಕೆರಳಿಸುವ ಪ್ರಯತ್ನ ಮಾಡಿದ್ದಕ್ಕೆ ಎಫ್ ಐ ಆರ್ ದಾಖಲಿಸಲಾಗಿದೆ ಎಂದಾಗ ಅರವಿಂದ ಬೆಲ್ಲದ್, ಬಿಜೆಪಿ ಶಾಸಕರು ಅಲ್ಲಿಗೆ ಹೊಗೇ ಇಲ್ಲ ಸುಳ್ಳು ಕೇಸ್ ದಾಖಲಿಸಲಾಗಿದೆ ಎಂದರು. ಗುಂಡೂರಾವ್ ಜೊತೆ ಸಚಿವ ಕೃಷ್ಣ ಭೈರೇಗೌಡ ಎದ್ದು ನಿಂತು ಮಾತಾಡತೊಡಗಿದಾಗ ಬಿಜೆಪಿ ಪರ ವಿಜಯೇಂದ್ರ ಮತ್ತು ಬೇರೆ ಶಾಸಕಕರು ಧ್ವನಿಗೂಡಿಸುತ್ತಾರೆ.

Follow us
|

Updated on: Feb 15, 2024 | 2:06 PM

ಬೆಂಗಳೂರು: ಮಂಗಳೂರಿನ ಸಂತ ಜೆರೂಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ (teacher Prabha sister) ಎನ್ನುವರು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ ಪ್ರಕರಣ ಇಂದು ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ ಚರ್ಚೆಗೆ ಬಂದು ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ ಟೀಚರ್ ವಿರುದ್ಧ ಎಫ್ ಐ ಆರ್ ದಾಖಲಾಗಿಲ್ಲ ಆದರೆ, ಸ್ಥಳದಲ್ಲೇ ಇರದ ತನ್ನ ಮತ್ತು ಮತ್ತೊಬ್ಬ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ (Veda Vyas Kamath) ವಿರುದ್ಧ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ಶಾಸಕ ಭರತ್ ಶೆಟ್ಟಿ (Bharat Shetty) ಕೋಪದಲ್ಲಿ ಹೇಳಿದರು. ಶಾಲಾ ವ್ಯವಸ್ಥಾಪಕ ಮಂಡಳಿ ಶಿಕ್ಷಕಿಯನ್ನು ಈಗಾಗಲೇ ಸಸ್ಪೆಂಡ್ ಮಾಡಿದೆ ಅನ್ನೋದು ಬೇರೆ ವಿಚಾರ. ಸರ್ಕಾರದ ಪರ ಉತ್ತರ ನೀಡಲು ಎದ್ದು ನಿಂತ ಮಂಗಳೂರು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಬಿಜೆಪಿ ಶಾಸಕರು ಶಾಲೆಯ ಬಳಿ ಮಕ್ಕಳ ಮನಸ್ಸಿನಲ್ಲಿ ಕೋಮು ಭಾವನೆ ಕೆರಳಿಸುವ ಪ್ರಯತ್ನ ಮಾಡಿದ್ದಕ್ಕೆ ಎಫ್ ಐ ಆರ್ ದಾಖಲಿಸಲಾಗಿದೆ ಎಂದಾಗ ಅರವಿಂದ ಬೆಲ್ಲದ್, ಬಿಜೆಪಿ ಶಾಸಕರು ಅಲ್ಲಿಗೆ ಹೊಗೇ ಇಲ್ಲ ಸುಳ್ಳು ಕೇಸ್ ದಾಖಲಿಸಲಾಗಿದೆ ಎಂದರು. ಗುಂಡೂರಾವ್ ಜೊತೆ ಸಚಿವ ಕೃಷ್ಣ ಭೈರೇಗೌಡ ಎದ್ದು ನಿಂತು ಮಾತಾಡತೊಡಗಿದಾಗ ಬಿಜೆಪಿ ಪರ ವಿಜಯೇಂದ್ರ ಮತ್ತು ಬೇರೆ ಶಾಸಕಕರು ಧ್ವನಿಗೂಡಿಸುತ್ತಾರೆ. ಅಗಲೇ ಸದನ ರಣಾಂಗಣವಾಗಿ ಬದಲಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ