ಬಿ ಎಮ್ ಡಬ್ಲ್ಯು ಇಂಡಿಯ ಸ್ಕೂಟರ್​ ತಯಾರಿಸಿರೋದು ಮಾತ್ರ ನಿಜ, ಆದರೆ ಮಾರುತ್ತಿರೋದು ಮಾತ್ರ ಕಾರಿನ ಬೆಲೆಯಲ್ಲಿ!

ಬಿ ಎಮ್ ಡಬ್ಲ್ಯು ಇಂಡಿಯ ಸ್ಕೂಟರ್​ ತಯಾರಿಸಿರೋದು ಮಾತ್ರ ನಿಜ, ಆದರೆ ಮಾರುತ್ತಿರೋದು ಮಾತ್ರ ಕಾರಿನ ಬೆಲೆಯಲ್ಲಿ!
| Updated By: shivaprasad.hs

Updated on:Oct 16, 2021 | 6:39 AM

ಈ ಸ್ಕೂಟರ್ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಜೊತೆಗೆ ಸಿವಿಟಿ ಗೇರ್ ಬಾಕ್ಸ್ ಹೊಂದಿರುವ ಸಿ 400 ಜಿಟಿ ಸ್ಕೂಟರ್ ಕೇವಲ 9.5 ಸೆಕೆಂಡ್​ಗಳಲ್ಲಿ 100 ಕಿಮೀ/ ಗಂಟೆ ವೇಗವನ್ನು ಪಡೆದುಕೊಳ್ಳುತ್ತದೆ.

ಬಿ ಎಮ್ ಡಬ್ಲ್ಯು ಅಂದಾಕ್ಷಣ ನಮಗೆ ಐಷಾರಾಮಿ ಕಾರು ಮಾತ್ರ ನೆನಪಾಗುತ್ತದೆ. ಆದರೆ ವಿಶ್ವದ ಪ್ರಮುಖ ಕಾರು ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಈ ಕಂಪನಿಯು ಸ್ಕೂಟರ್​​ಗಳನ್ನು ಉತ್ಪಾದಿಸಲು ಆರಂಭಿಸಿರೋದು ಸೋಜಿಗ ಹುಟ್ಟಿಸುವ ಸಂಗತಿಯೇ. ಮತ್ತೂ ಸೋಜಿಗದ ಸಂಗತಿಯೆಂದರೆ, ಬಿ ಎಮ್ ಡಬ್ಲ್ಯು ಇಂಡಿಯ ಸ್ಕೂಟರ್ ತಯಾರಿಕೆಗೆ ಇಳಿದರೂ ಅದನ್ನು ಮಾರುತ್ತಿರೋದು ಮಾತ್ರ ಕಾರಿನ ಬೆಲೆಯಲ್ಲಿ!! ಯಾಕೆ ಹೀಗೆ ಹೇಳುತ್ತಿದ್ದೇವೆ ಅಂತ ಗೊತ್ತಾ? ಬಿ ಎಮ್ ಡಬ್ಲ್ಯು ಸಿ400 ಜಿಟಿ ಮ್ಯಾಕ್ಸಿ ಸ್ಕೂಟರ್ ಬೆಲೆ ರೂ 9.95 ಲಕ್ಷ ಮಾತ್ರ! ಸದ್ಯಕ್ಕೆ ಭಾರತದಲ್ಲಿ ಮಾರಾಟಕ್ಕಿರುವ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಂತ ದುಬಾರಿ ಸ್ಕೂಟರ್ ಎಂದರೆ ಇದೇ.

ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಸಿ400 ಜಿಟಿ ಮ್ಯಾಕ್ಸಿ ಸ್ಕೂಟರ್ 350 ಸಿಸಿ ಎಂಜಿನ್​ನಿಂದ 34 ಹೆಚ್ ಪಿ ಮತ್ತು 35 ಎನ್ ಎಮ್ ಅನ್ನು ಉತ್ಪಾದಿಸುತ್ತದೆ. ಈ ಸ್ಕೂಟರ್ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಜೊತೆಗೆ ಸಿವಿಟಿ ಗೇರ್ ಬಾಕ್ಸ್ ಹೊಂದಿರುವ ಸಿ 400 ಜಿಟಿ ಸ್ಕೂಟರ್ ಕೇವಲ 9.5 ಸೆಕೆಂಡ್​ಗಳಲ್ಲಿ 100 ಕಿಮೀ/ ಗಂಟೆ ವೇಗವನ್ನು ಪಡೆದುಕೊಳ್ಳುತ್ತದೆ.

ಇದರ ಟಾಪ್ ಸ್ಪೀಡ್ 139 ಕೆಎಮ್ಪಿಎಚ್ ಬಿಎಂಡಬ್ಲ್ಯು ಸಿ 400 ಜಿಟಿಯ ದೊಡ್ಡ ಬಾಡಿ ಪ್ಯಾನಲ್‌, ಎಲ್‌ಇಡಿ ದೀಪಗಳು ಮತ್ತು ಕಾಂಪ್ಯಾಕ್ಟ್ ಹಿಂಭಾಗವು ಅದರ ವಿನ್ಯಾಸವನ್ನು ಗಮನಾರ್ಹವಾಗಿಸುತ್ತವೆ. ಸ್ಕೂಟರ್ ಮುಂಭಾಗದಲ್ಲಿ 15 ಇಂಚಿನ ಚಕ್ರಗಳನ್ನು ಮತ್ತು ಹಿಂಭಾಗದಲ್ಲಿ 14 ಇಂಚಿನ ಚಕ್ರಗಳನ್ನು ಬಳಸಲಾಗಿದೆ. ಸಣ್ಣ ಹಿಂಬದಿ ಚಕ್ರ ಹೆಚ್ಚುವರಿ ಶೇಖರಣಾ ಸ್ಟೋರೇಜ್ ಒದಗಿಸುತ್ತದೆ ಎಂದು ಬಿ ಎಮ್ ಡಬ್ಲ್ಯೂ ಹೇಳಿದೆ.

ಎಬಿಎಸ್, ಟ್ರಾಕ್ಷನ್ ಕಂಟ್ರೋಲ್ ಮತ್ತು ರೈಡ್ ಮೋಡ್‌ಗಳು ಸೇರಿದಂತೆ ಸುರಕ್ಷತಾ ಸಾಧನಗಳೊಂದಿಗೆ ಮುಂಭಾಗದಲ್ಲಿ ಟ್ವಿನ್ ಡಿಸ್ಕ್ ಸೆಟಪ್ ಮತ್ತು ಹಿಂಭಾಗದಲ್ಲಿ ಒಂದೇ ಡಿಸ್ಕ್ ಮೂಲಕ ಬ್ರೇಕಿಂಗ್ ಅನ್ನು ನಿರ್ವಹಿಸಲಾಗುತ್ತದೆ. ಇತರ ವೈಶಿಷ್ಟ್ಯಗಳಲ್ಲಿ ಫುಲ್-ಎಲ್ಇಡಿ ದೀಪಗಳು, ಕೀರಹಿತ ಇಗ್ನಿಷನ್, ಯುಎಸ್‌ಬಿ ಚಾರ್ಜಿಂಗ್ ಮತ್ತು ಬ್ಲೂಟೂತ್ ಸಂಪರ್ಕದೊಂದಿಗೆ ಟಿಎಫ್‌ಟಿ ಡಿಸ್‌ಪ್ಲೇ ಸೇರಿವೆ.

ಇದನ್ನೂ ಓದಿ:  Nitin Gadkari: ಬೇರೆ ಪ್ರಯಾಣಿಕರೊಂದಿಗೆ ಕ್ಯೂನಲ್ಲಿ ನಿಂತು ವಿಮಾನ ಹತ್ತಿದ ಕೇಂದ್ರ ಸಚಿವ ನಿತಿನ್ ಗಡ್ಕರಿ; ವಿಡಿಯೋ ವೈರಲ್

Published On - 1:20 am, Sat, 16 October 21

Follow us
ನನ್ನ ವರ್ಚಸ್ಸು ಹಾಳು ಮಾಡಲು ಯತ್ನ: ಬಿಜೆಪಿ ನಾಯಕರ ಮೇಲೆ ಹೆಚ್​ಡಿಕೆ ಗರಂ
ನನ್ನ ವರ್ಚಸ್ಸು ಹಾಳು ಮಾಡಲು ಯತ್ನ: ಬಿಜೆಪಿ ನಾಯಕರ ಮೇಲೆ ಹೆಚ್​ಡಿಕೆ ಗರಂ
ಸುದೀಪ್ ತಾಯಿ ಬಗ್ಗೆ ರಾಘಣ್ಣ ಮಾತು, ಹಳೆಯ ನೆನಪುಗಳ ಮೆಲುಕು
ಸುದೀಪ್ ತಾಯಿ ಬಗ್ಗೆ ರಾಘಣ್ಣ ಮಾತು, ಹಳೆಯ ನೆನಪುಗಳ ಮೆಲುಕು
ದೆಹಲಿ: ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ
ದೆಹಲಿ: ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ
ಬೆಂಗಳೂರು ಮಳೆ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ನಿಂತ ನೀರು
ಬೆಂಗಳೂರು ಮಳೆ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ನಿಂತ ನೀರು
ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಸ್ತ್ರೀಯರು ಬೈತಲೆ ತೆಗೆದು ತಲೆ ಬಾಚಿದ್ರೆ ಏನಾಗುತ್ತೆ? ವಿಡಿಯೋ ನೋಡಿ
ಸ್ತ್ರೀಯರು ಬೈತಲೆ ತೆಗೆದು ತಲೆ ಬಾಚಿದ್ರೆ ಏನಾಗುತ್ತೆ? ವಿಡಿಯೋ ನೋಡಿ
ವಾರ ಭವಿಷ್ಯ: ಅಕ್ಟೋಬರ್ 21 ರಿಂದ 27 ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ಅಕ್ಟೋಬರ್ 21 ರಿಂದ 27 ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ರವಿವಾರ ಸಂಕಷ್ಟ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ರವಿವಾರ ಸಂಕಷ್ಟ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಯಾರೆಂದು ನಾಳೆ ಫೈನಲ್
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಯಾರೆಂದು ನಾಳೆ ಫೈನಲ್
ರೈಲು ಅಪಘಾತದಿಂದ 60 ಆನೆಗಳ ರಕ್ಷಣೆ; ಲೋಕೋ ಪೈಲಟ್ ಕಾರ್ಯಕ್ಕೆ ಮೆಚ್ಚುಗೆ
ರೈಲು ಅಪಘಾತದಿಂದ 60 ಆನೆಗಳ ರಕ್ಷಣೆ; ಲೋಕೋ ಪೈಲಟ್ ಕಾರ್ಯಕ್ಕೆ ಮೆಚ್ಚುಗೆ