Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳಿಂದ ಶಾಲಾ ಆವರಣ ಮತ್ತು ಶೌಚಾಲಯ ಶುಚಿಮಾಡಿಸುವ ಪ್ರಕರಣ ಈಗ ನಡೆಯುತ್ತಿಲ್ಲ: ಮಧು ಬಂಗಾರಪ್ಪ

ಮಕ್ಕಳಿಂದ ಶಾಲಾ ಆವರಣ ಮತ್ತು ಶೌಚಾಲಯ ಶುಚಿಮಾಡಿಸುವ ಪ್ರಕರಣ ಈಗ ನಡೆಯುತ್ತಿಲ್ಲ: ಮಧು ಬಂಗಾರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 29, 2025 | 3:00 PM

ಶೌಚಾಲಯ ತೊಳೆಯುವ ಮತ್ತು ಕಸವನ್ನು ಗುಡಿಸುವ ಕೆಲಸವನ್ನು ಕೆಲ ಶಾಲೆಗಳಲ್ಲಿ ಶಿಕ್ಷಕರೇ ಮಾಡಿದ ಪ್ರಕರಣಗಳು ಸಹ ಸರ್ಕಾರದ ಗಮನಕ್ಕೆ ಬಂದಿವೆ, ಆದರೆ ಅವರೂ ಅದನ್ನೆಲ್ಲ ಮಾಡುವ ಅವಶ್ಯಕತೆಯಿಲ್ಲ ಎಂದು ಬಂಗಾರಪ್ಪ ಹೇಳಿದರು. ಶಾಲೆಗಳು ಮತ್ತು ಶೌಚಾಲಯ ಸಣ್ಣಪುಟ್ಟ ರಿಪೇರಿಗಳನ್ನು ಆಯಾ ಜಿಲ್ಲಾಧಿಕಾರಿ ಮತ್ತು ಸಿಇಓಗಳು ಮಾಡಿಸಿಕೊಡುತ್ತಿದ್ದಾರೆ ಎಂದು ಸಚಿವ ಹೇಳಿದರು.

ಬೆಂಗಳೂರು, ಮಾರ್ಚ್ 29: ರಾಜ್ಯ ಹಲವು ಸರ್ಕಾರೀ ಶಾಲೆಗಳಲ್ಲಿ (government schools) ಮಕ್ಕಳಿಂದ ಕಸ ಗುಡಿಸುವ ಮತ್ತು ಶೌಚಾಲಯಗಳನ್ನು ಶುಚಿಗೊಳಿಸುವ ಕೆಲಸ ಮಾಡಿಸಿದ ಪ್ರಕರಣಗಳು ವರದಿಯಾಗಿವೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಅಂಥ ಘಟನೆಗಳು ಈಗ ನಡೆಯುತ್ತಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೆಂಟೇನನ್ಸ್ ಗೆ ಅಂತ ಶಾಲೆಗಳಿಗೆ ನೀಡುತ್ತಿದ್ದ ಹಣದ ಮೊತ್ತವನ್ನು ದ್ವಿಗುಣಗೊಳಿಸಿದ್ದಾರೆ, ಅಲ್ಲದೆ ಮಕ್ಕಳಿಂದ ಕ್ಲೀನ್ ಮಾಡಿಸುವ ಪ್ರಕರಣ ಗಮನಕ್ಕೆ ಬಂದರೆ ಮರುಕ್ಷಣವೇ ಕ್ರಮ ಜರುಗಿಸಲಾಗುವುದು ಮತ್ತು ಅದನ್ನೆಲ್ಲ ನೋಡಿಕೊಳ್ಳುವ ಜವಾಬ್ದಾರಿಯನ್ನು ಶಾಲಾ ಸುಧಾರಣಾ ಸಮಿತಿಗಳಿಗೆ ವಹಿಸಲಾಗಿದೆ ಎಂದರು.

ಇದನ್ನೂ ಓದಿ:  ಎರಡು ದಿನ ಕಳೆದರೂ ಬಸವೇಶ್​ನ ಬಂಧನವಿಲ್ಲ, ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಸಮಂಜಸ ಪ್ರತಿಕ್ರಿಯೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ