ನಾನು ಫೋನ್ ಮಾಡುವ ಮೊದಲೇ ಚಕ್ರವರ್ತಿ ಸೂಲಿಬೆಲೆಗೆ ಚೈತ್ರಾ ಕುಂದಾಪುರ ವಂಚನೆ ಪ್ರಕರಣ ಗೊತ್ತಾಗಿತ್ತು: ರಾಜಶೇಖರಾನಂದ ಸ್ವಾಮೀಜಿ

ಹಾಲಾಶ್ರೀ ಸ್ವಾಮಿ ಯುವ ಬ್ರಿಗೇಡ್ ನಲ್ಲಿ ಗುರುತಿಸಿಕೊಂಡಿದ್ದ ಕಾರಣ ಅದರ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಅವರಿಗೆ ಫೋನ್ ಮಾಡಿದಾಗ ಅವರಿಗೆ ಅದಾಗಲೇ ವಿಷಯ ಗೊತ್ತಾಗಿತ್ತು ಎಂದು ರಾಜಶೇಖರಾನಂದ ಸ್ವಾಮೀಜಿ ಹೇಳುತ್ತಾರೆ. ಚೈತ್ರಾ ತನಗೆ ಚೆನ್ನಾಗಿ ಗೊತ್ತು ಅಂತ ಹೇಳುವ ಸ್ವಾಮೀಜಿ ಆಕೆ ಬರೆದ ಲವ್ ಜಿಹಾದ್ ಪುಸ್ಕಕಕ್ಕೆ ತಾವೇ ಬೆನ್ನುಡಿ ಬರೆದಿದ್ದು ಅನ್ನುತ್ತಾರೆ.

ನಾನು ಫೋನ್ ಮಾಡುವ ಮೊದಲೇ ಚಕ್ರವರ್ತಿ ಸೂಲಿಬೆಲೆಗೆ ಚೈತ್ರಾ ಕುಂದಾಪುರ ವಂಚನೆ ಪ್ರಕರಣ ಗೊತ್ತಾಗಿತ್ತು: ರಾಜಶೇಖರಾನಂದ ಸ್ವಾಮೀಜಿ
|

Updated on: Sep 18, 2023 | 3:01 PM

ಮಂಗಳೂರು: ಚೈತ್ರಾ ಕುಂದಾಪುರ ಜಾರಿ ನಿರ್ದೇಶನಾಲಯಗೆ ಬರೆದಿರುವ ಪತ್ರದಲ್ಲಿ ವಜ್ರದೇಹಿ ಮಠದ ಶ್ರೀಗಳಾಗಿರುವ ರಾಜಶೇಖರಾನಂದ ಸ್ವಾಮೀಜಿ (Rajashekharananda Swamiji) ಅವರ ಹೆಸರರು ಕೂಡ ಪ್ರಸ್ತಾಪವಾಗಿದೆ. ಇದೇ ಹಿನ್ನೆಲೆಯಲ್ಲಿ ಟಿವಿ9 ಕನ್ನಡ ವಾಹಿನಿಯ ಮಂಗಳೂರು ವರದಿಗಾರನೊಂದಿಗೆ ಮಾತಾಡಿರುವ ಸ್ವಾಮೀಜಿ ತಮ್ಮ ಹೆಸರು ಉಲ್ಲೇಖ ಅಗಿರುವುದಕ್ಕೆ ಕಾರಣ ತಿಳಿಸುತ್ತಾರೆ. ಅಸಲಿಗೆ ಹಿಂದೂ ಜಾಗರಣಾ ವೇದಿಕೆಯ ರಾಷ್ಟ್ರಿಯ ನಾಯಕರಾಗಿದ್ದ ಸತ್ಯಜಿತ್ ಸುರತ್ಕಲ್ (Satyajit Suratkal) ಎನ್ನುವವರು ತಪ್ಪು ಗ್ರಹಿಕೆಯಿಂದಾಗಿ, ರಾಜಶೇಖರಾನಂದ ಸ್ವಾಮೀಜಿ ಅವರೇ ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ರೂ. 1.5 ಕೋಟಿ ಪಡೆದಿದ್ದು ಅದನ್ನು ಕೂಡಲೇ ಹಿಂತಿರುಗಿಸುವಂತೆ ಫೋನ್ ಮಾಡಿದ್ದರಂತೆ. ಆರೋಪ ಕೇಳಿ ಕೋಪೋದ್ರಿಕ್ತರಾದ ಸ್ವಾಮೀಜಿ, ಸುರತ್ಕಲ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರಂತೆ. ನಂತರ ಸುರತ್ಕಲ್ ಅವರಿಗೆ ವಾಸ್ತವಾಂಶ ಗೊತ್ತಾಗಿ, ಹಣ ಸಂದಾಯವಾಗಿರೋದು ಅಭಿನವ ಹಾಲಾಶ್ರೀ ಸ್ವಾಮಿಗೆ (Abhinava Halashri Swamy) ಅಂತ ಹೇಳಿದರಂತೆ. ಆಗಲೂ ರಾಜಶೇಖರಾನಂದ ಸ್ವಾಮೀಜಿ ಅವರು ಸುರತ್ಕಲ್ ಮೇಲೆ ಕೆಂಡ ಕಾರಿದರಂತೆ. ಹಾಲಾಶ್ರೀ ಸ್ವಾಮಿ ಯುವ ಬ್ರಿಗೇಡ್ ನಲ್ಲಿ ಗುರುತಿಸಿಕೊಂಡಿದ್ದ ಕಾರಣ ಅದರ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ (Chakravarty Sulibele) ಅವರಿಗೆ ಫೋನ್ ಮಾಡಿದಾಗ ಅವರಿಗೆ ಅದಾಗಲೇ ವಿಷಯ ಗೊತ್ತಾಗಿತ್ತು ಎಂದು ರಾಜಶೇಖರಾನಂದ ಸ್ವಾಮೀಜಿ ಹೇಳುತ್ತಾರೆ. ಚೈತ್ರಾ ತನಗೆ ಚೆನ್ನಾಗಿ ಗೊತ್ತು ಅಂತ ಹೇಳುವ ಸ್ವಾಮೀಜಿ ಆಕೆ ಬರೆದ ಲವ್ ಜಿಹಾದ್ ಪುಸ್ಕಕಕ್ಕೆ ತಾವೇ ಬೆನ್ನುಡಿ ಬರೆದಿದ್ದು ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್