ಚಿಕ್ಕಮಗಳೂರು: ಶವಸಂಸ್ಕಾರದ (funereal ceremony) ವೇಳೆಯಲ್ಲಿ ಇಂಥ ಸಂಗತಿಗಳು ಸಾಮಾನ್ಯವಾಗಿ ಘಟಿಸುವುದಿಲ್ಲ. ಆದರೆ, ನಗರದ ಶಂಕರಪುರದಲ್ಲಿ ಪಾರ್ಥೀವ ಶರೀರವೊಂದನ್ನು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ರುದ್ರಭೂಮಿಗೆ (graveyard) ಸಾಗಿಸುವಾಗ ಶಾಂತಿವಾಹನ ಕೆಟ್ಟುನಿಂತಿದೆ. ವಿಧಿಹಿಲ್ಲದೆ ಮೃತರ ಸಂಬಂಧಿಕರು ವಾಹನವನ್ನು ತಳ್ಳಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ನಗರಸಭೆಗೆ ಸೇರಿದ ಶಾಂತಿವಾಹನ ಎಂಜಿನ್ ನಲ್ಲಿ ಸ್ಟಾರ್ಟಿಂಗ್ ಸಮಸ್ಯೆ (starting trouble) ಇದೆ. ಅದನ್ನು ಸ್ಟಾರ್ಟ್ ಮಾಡಬೇಕಾದರೆ ತಳ್ಳಲೇಬೇಕು. ಆದರೆ ಪಾರ್ಥೀವ ಶರೀರ ಸಾಗಿಸುವಾಗ ಅದು ತಳ್ಳಿದರೂ ಸ್ಟಾರ್ಟ್ ಆಗದ ಕಾರಣ ಅದನ್ನು ತಳ್ಳಿದ ಕುಟುಂಬದ ಸದಸ್ಯರು ನಗರಸಭೆ ವಿರುದ್ಧ ಆಕ್ರೋಶ ವ್ಕಕ್ತಪಡಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ