AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರೊಂದಿಗೆ ಬಸ್ ಚಾಲಕನ ಕಿರಿಕ್: ಹಾವು ಕಚ್ಚಲಿ, ಲಕ್ವಾ ಹೊಡೆಯಲಿ ಎಂದು ಶಾಪ

ಪ್ರಯಾಣಿಕರೊಂದಿಗೆ ಬಸ್ ಚಾಲಕನ ಕಿರಿಕ್: ಹಾವು ಕಚ್ಚಲಿ, ಲಕ್ವಾ ಹೊಡೆಯಲಿ ಎಂದು ಶಾಪ

ಬಸವರಾಜ ಮುದನೂರ್
| Edited By: |

Updated on: Sep 16, 2026 | 1:47 PM

Share

ಚಿತ್ರದುರ್ಗದಲ್ಲಿ ಶಿವಮೊಗ್ಗಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಗಂಟೆಗಳ ಕಾಲ ವಿಳಂಬವಾದ ಘಟನೆ ನಡೆದಿದೆ. ತಡವಾಗಿ ಬಂದ ಬಸ್ ಚಾಲಕ ಪ್ರಯಾಣಿಕರಿಗೆ ಹಾವು ಕಚ್ಚಲಿ, ಲಕ್ವಾ ಹೊಡೆಯಲಿ ಎಂದು ಶಾಪ ಹಾಕಿದ್ದಾನೆ. ಇದರಿಂದ ಕುಪಿತಗೊಂಡ ಪ್ರಯಾಣಿಕರು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದು, ಬಸ್ ನಿಲ್ದಾಣದಲ್ಲಿ ಭಾರೀ ಗಲಾಟೆ ನಡೆದಿದೆ.

ಚಿತ್ರದುರ್ಗ, ಸೆಪ್ಟೆಂಬರ್​​ 16: ಶಿವಮೊಗ್ಗಕ್ಕೆ ತೆರಳಬೇಕಿದ್ದ ಕೆಎಸ್‌ಆರ್‌ಟಿಸಿ ಬಸ್ ವಿಳಂಬದಿಂದಾಗಿ ಚಿತ್ರದುರ್ಗ ಬಸ್ ನಿಲ್ದಾಣದಲ್ಲಿ ಬಸ್ ಚಾಲಕ ಮತ್ತು ಪ್ರಯಾಣಿಕರ ನಡುವೆ ತೀವ್ರ ವಾಗ್ವಾದ ನಡೆದಿದೆ. ಗಂಟೆಗಳ ಕಾಲ ಬಸ್ ವಿಳಂಬವಾಗಿದ್ದರಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದರು. ಈ ನಡುವೆ ತಡವಾಗಿ ಬಂದ ಬಸ್ ಚಾಲಕ, ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಏಕಾಏಕಿ ಹಿಡಿಶಾಪ ಹಾಕಿದ್ದಾನೆ. “ಹಾವು ಕಚ್ಚಲಿ, ಲಕ್ವಾ ಹೊಡಿಲಿ” ಎಂದೆಲ್ಲಾ ಚಾಲಕ ಶಪಿಸಿದ್ದಾನೆ ಎನ್ನಲಾಗಿದೆ. ಇದರಿಂದ ಕೆರಳಿದ ಪ್ರಯಾಣಿಕರು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆಯ ವಿಡಿಯೋ ವೈರಲ್​​ ಆಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us