ಯಶವಂತಪುರ APMC ಆವರಣದಲ್ಲಿ ತಿಂಡಿ ಸವಿದ ಸಿಎಂ ಡಿಕೆಶಿ: ಪುಟ್ಟ ಹೋಟೆಲ್ನ ಮಾಲೀಕನಿಗೆ ಪಾವತಿಸಿದ ಹಣ ಎಷ್ಟು ಗೊತ್ತಾ?
ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ ನೀಡಿದ್ದು, ರೈತರು ಮತ್ತು ವರ್ತಕರೊಂದಿಗೆ ಮಾರುಕಟ್ಟೆ ಸ್ಥಿತಿ, ತೂಕದಲ್ಲಿ ಮೋಸದ ಕುರಿತು ಮಾಹಿತಿ ಪಡೆದಿದ್ದಾರೆ. ಈ ವೇಳೆ ಮಾರುಕಟ್ಟೆ ಆವರಣದ ಪುಟ್ಟ ಹೋಟೆಲ್ನಲ್ಲಿ ಸರಳ ಉಪಾಹಾರ ಸೇವಿಸುವ ಮೂಲಕ ಸಿಎಂ, ಸಾರ್ವಜನಿಕರೊಂದಿಗೆ ಬೆರೆತರು. ಇಡ್ಲಿ, ಚಿತ್ರಾನ್ನದ ಬೆಲೆ ಹಾಗೂ ಹೋಟೆಲ್ ಮಾಲೀಕರ ದಿನನಿತ್ಯದ ವ್ಯಾಪಾರದ ಬಗ್ಗೆಯೂ ವಿಚಾರಿಸಿದರು.
ಬೆಂಗಳೂರು, ಸೆಪ್ಟೆಂಬರ್ 08: ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಿಢೀರ್ ಭೇಟಿ ನೀಡಿದ್ದು, ರೈತರು ಮತ್ತು ವ್ಯಾಪಾರಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ APMC ಆವರಣದಲ್ಲಿರುವ ಪುಟ್ಟ ಹೋಟೆಲ್ಗೆ ಭೇಟಿ ನೀಡಿದ ಅವರು ಇಡ್ಲಿ, ಚಟ್ನಿ, ಸಾಂಬಾರ್ ಮತ್ತು ಚಿತ್ರಾನ್ನವನ್ನು ಸವಿದಿದ್ದಾರೆ. ಬ್ರೇಕ್ಫಾಸ್ಟ್ ಬಳಿಕ ಮೂವರ ಬಿಲ್ನ ಡಿಕೆಶಿ ಅವರೇ ಪಾವತಿಸಿದ್ದು, ಹೋಟೆಲ್ ಮಾಲೀಕರನ ಬಳಿ ದಿನದ ವ್ಯಾಪಾರದ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
