ಮೊಮ್ಮಗನ ಧವನ್ ಜತೆ ಡೊಳ್ಳು ಬಾರಿಸಿದ ಸಿಎಂ ಸಿದ್ದರಾಮಯ್ಯ: ಕನಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ

Updated on: Sep 20, 2025 | 3:35 PM

ಗದಗ ನಗರದ ಕನಕ ಭವನದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕನಕೋತ್ಸವ ಕಾರ್ಯಕ್ರಮ ಹಾಗೂ ಗದಗ ತಾಲೂಕು ಕುರುಬರ ಸಂಘದ ರಜತ ಮಹೋತ್ಸವ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಇದೇ ವೇಳೆ ಸಿದ್ದರಾಮಯ್ಯ ಮೊಮ್ಮಗ ಧವನ್ ಕೂಡ ತಾತನ ಜತೆ ಡೊಳ್ಳು ಬಾರಿಸಿದ್ದಾನೆ. ತಾತ ಹಾಗೂ ಮೊಮ್ಮಗ ಡೊಳ್ಳು ಬಾರಿಸುವ ವಿಡಿಯೋ ಇಲ್ಲಿದೆ.

ಗದಗ, ಸೆಪ್ಟೆಂಬರ್ 20: ಗದಗ ತಾಲೂಕು ಕುರುಬರ ಸಂಘದ ರಜತ ಮಹೋತ್ಸವ ಹಾಗೂ ರಾಜ್ಯ ಮಟ್ಟದ ಕನಕೋತ್ಸವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮಕ್ಕೆ ಮೊಮ್ಮಗ ಧವನ್​ ಜತೆಗೆ ಬಂದ ಸಿದ್ದರಾಮಯ್ಯ ಆತನ ಜತೆ ಡೊಳ್ಳು ಬಾರಿಸಿದರು. ಗದಗ ನಗರದ ಕನಕ ಭವನದಲ್ಲಿ ಕಾರ್ಯಕ್ರಮ ಆಯೋಜನೆಯಾಗಿದ್ದು, ಸಚಿವ ಎಚ್​ಕೆ ಪಾಟೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ