ಡಿ ಸುಧಾಕರ್ ವಿರುದ್ಧ ಎಫ್ ಐಆರ್ ದಾಖಲಾಗಿದ್ದರೂ ಸಿಎಂ ಸಿದ್ದರಾಮಯ್ಯ ತಮ್ಮ ಸಚಿವನನ್ನು ಇನ್ನೂ ಕರೆಸಿ ಮಾತಾಡಿಲ್ಲ!

ನಂತರ ಸಿದ್ದಾರಾಮಯ್ಯ, ಸುಧಾಕರ್ ಮಿನಿಸ್ಟ್ರಾಗಿದ್ದರೂ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದು ಹೇಳುತ್ತಾರೆ. ಸಚಿವನ ವಿರುದ್ಧ ಪ್ರಕರಣ ದಾಖಲಾಗಿರುವುದೇ ಒಂದು ದೊಡ್ಡ ಸಾಧನೆ ಅನ್ನುವಂತಿತ್ತು ಅವರ ಮಾತಿನ ವರಸೆ. ಸುಧಾಕರ್ ರನ್ನು ಕರೆಸಿ ಮಾತಾಡುತ್ತೇನೆ ಎಂದು ಹೇಳುತ್ತಾ ಸಿದ್ದರಾಮಯ್ಯ ಅಲ್ಲಿಂದ ಹೊರಡುತ್ತಾರೆ.

|

Updated on: Sep 12, 2023 | 6:02 PM

ಬೆಂಗಳೂರು: ಯೋಜನೆ & ಸಾಂಖ್ಯಿಕ ಇಲಾಖೆ ಸಚಿವ ಡಿ ಸುಧಾಕರ್ (D Sudhakar) ವಿರುದ್ಧ ಜಾತಿ ನಿಂದನೆ ಮತ್ತು ಭೂ ಕಬಳಿಕೆ ಕೇಸ್ ದಾಖಲಾಗಿರೋದು ನಿಸ್ಸಂದೇಹವಾಗಿ ಸಿದ್ದರಾಮಯ್ಯ ಸರ್ಕಾರವನ್ನು (Siddaramaiah Government) ಇಕ್ಕಟ್ಟಿಗೆ ಸಿಲುಕಿಸಿದೆ. ಇಂದು ನಗರದಲ್ಲಿ ಸುದ್ದಿಗಾರರು ಸಿದ್ದರಾಮಯ್ಯರನ್ನು ಸುತ್ತುವರಿದು ಸುಧಾಕರ್ ಬಗ್ಗೆ ಕೇಳಿದಾಗ ಸಿದ್ದರಾಮಯ್ಯ ಉತ್ತರಿಸಲು ತಡವರಿಸಿದರು. ಅವರ ವಿರುದ್ಧ ಜಾತಿ ನಿಂದನೆ ಮತ್ತು ಭೂಕಬಳಿಕೆ ಕೇಸ್ ದಾಖಲಾಗಿದೆ ಸರ್ ಅಂತ ಪತ್ರಕರ್ತರು ಹೇಳಿದಾಗ ಮುಖ್ಯಮಂತ್ರಿ ಜಾತಿ ನಿಂದನೆ ಕೇಸ್ (atrocity case) ದಾಖಲಾಗಿದೆಯಾ ಅಂತ ಕೇಳಿ, ಪತ್ರಿಕೆಯ ವರದಿಯೊಂದರ ಮುಖಾಂತರ ವಿಷಯ ತಿಳಿದುಕೊಂಡಿರುವುದಾಗಿ ಹೇಳುತ್ತಾರೆ. ನಂತರ ಸಿದ್ದಾರಾಮಯ್ಯ, ಸುಧಾಕರ್ ಮಿನಿಸ್ಟ್ರಾಗಿದ್ದರೂ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದು ಹೇಳುತ್ತಾರೆ. ಸಚಿವನ ವಿರುದ್ಧ ಪ್ರಕರಣ ದಾಖಲಾಗಿರುವುದೇ ಒಂದು ದೊಡ್ಡ ಸಾಧನೆ ಅನ್ನುವಂತಿದೆ ಅವರ ಮಾತಿನ ವರಸೆ. ಸುಧಾಕರ್ ರನ್ನು ಕರೆಸಿ ಮಾತಾಡುತ್ತೇನೆ ಎಂದು ಹೇಳುತ್ತಾ ಮುಖ್ಯಮಂತ್ರಿ ಹೊರಡುತ್ತಿರುವಾಗ, ಇನ್ನೂ ಮಾತಾಡಿಲ್ವಾ ಸರ್ ಅಂತ ಸುದ್ದಿಗಾರರು ಕೇಳುತ್ತಾರೆ. ಕರೆಸಿ ಮಾತಾಡುತ್ತೇನೆ ಅಂತ ಜೋರಾಗಿ ಹೇಳುತ್ತಾ ಅಲ್ಲಿಂದ ಹೊರಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ
ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ
ಶಿವಮೊಗ್ಗ ಗಲಾಟೆ; ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಮಾಡಿದ್ದಾರೆ-ಮಧುಬಂಗಾರಪ್ಪ
ಶಿವಮೊಗ್ಗ ಗಲಾಟೆ; ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಮಾಡಿದ್ದಾರೆ-ಮಧುಬಂಗಾರಪ್ಪ
ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ!
ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ!
ಜಮೀರ್ ಬಗ್ಗೆ ಮಾತಾಡೋದು ಕೆಸರು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ
ಜಮೀರ್ ಬಗ್ಗೆ ಮಾತಾಡೋದು ಕೆಸರು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ
ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು
ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು
ಮೆರವಣಿಗೆಯಲ್ಲಿ ಜನ ಕತ್ತಿ, ಖಡ್ಗಗಳನ್ನೇನೂ ಹಿರಿದಿರಲಿಲ್ಲ: ಜಿ ಪರಮೇಶ್ವರ್
ಮೆರವಣಿಗೆಯಲ್ಲಿ ಜನ ಕತ್ತಿ, ಖಡ್ಗಗಳನ್ನೇನೂ ಹಿರಿದಿರಲಿಲ್ಲ: ಜಿ ಪರಮೇಶ್ವರ್
ಧಾರ್ಮಿಕ ಆಚರಣೆಗೆ ಅಡ್ಡಿ ಮಾಡುವುದನ್ನು ಸರ್ಕಾರ ಸಹಿಸಲ್ಲ: ಸಿದ್ದರಾಮಯ್ಯ
ಧಾರ್ಮಿಕ ಆಚರಣೆಗೆ ಅಡ್ಡಿ ಮಾಡುವುದನ್ನು ಸರ್ಕಾರ ಸಹಿಸಲ್ಲ: ಸಿದ್ದರಾಮಯ್ಯ
ನದಿಯಿಂದ ಹೊರಬಂದ‌ ಮೊಸಳೆ ರೈಲಿಗೆ ಸಿಲುಕಿ ಸಾವು
ನದಿಯಿಂದ ಹೊರಬಂದ‌ ಮೊಸಳೆ ರೈಲಿಗೆ ಸಿಲುಕಿ ಸಾವು
ಶಿವಮೊಗ್ಗದಲ್ಲಿ ಕಲ್ಲು ತೂರಾಟಕ್ಕೆ ಕೇವಲ ಹಿಂದೂ ಮನೆಗಳೇ ಟಾರ್ಗೆಟ್ ಆದವೇ?
ಶಿವಮೊಗ್ಗದಲ್ಲಿ ಕಲ್ಲು ತೂರಾಟಕ್ಕೆ ಕೇವಲ ಹಿಂದೂ ಮನೆಗಳೇ ಟಾರ್ಗೆಟ್ ಆದವೇ?
ಮಲೆ ಮಹದೇಶ್ವರನ ದರ್ಶನ ಪಡೆದ ನಟ ರಾಘವೇಂದ್ರ ರಾಜ್​ಕುಮಾರ್
ಮಲೆ ಮಹದೇಶ್ವರನ ದರ್ಶನ ಪಡೆದ ನಟ ರಾಘವೇಂದ್ರ ರಾಜ್​ಕುಮಾರ್