AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡಿ ಗಮನಸೆಳೆದ ಶಿವಲಿಂಗೇಗೌಡ, ವಿಡಿಯೋ ನೋಡಿ

ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡಿ ಗಮನಸೆಳೆದ ಶಿವಲಿಂಗೇಗೌಡ, ವಿಡಿಯೋ ನೋಡಿ

ಮಂಜುನಾಥ ಕೆಬಿ
| Updated By: ರಮೇಶ್ ಬಿ. ಜವಳಗೇರಾ

Updated on:Nov 06, 2023 | 8:33 AM

ಅರಸೀಕೆರೆ ಕಾಂಗ್ರೆಸ್ ಶಾಸಕ ಶಾಸಕ ಶಿವಲಿಂಗೇಗೌಡ ಅವರು ರೈತರ ಜೊತೆ ತರಕಾರಿ ಹರಾಜು ಪ್ರಕ್ರಿಯೆಯಲ್ಲಿ ತೊಡಗಿಕೊಂಡು ಗಮನಸೆಳೆದಿದ್ದಾರೆ.

ಹಾಸನ, (ನವೆಂಬರ್ 06): ಅರಸೀಕೆರೆ ಕಾಂಗ್ರೆಸ್ ಶಾಸಕ ಶಾಸಕ ಶಿವಲಿಂಗೇಗೌಡ (Congress MLA Shivalinge Gowda ) ಅವರು ರೈತರ ಜೊತೆ ತರಕಾರಿ ಹರಾಜು ಪ್ರಕ್ರಿಯೆಯಲ್ಲಿ ತೊಡಗಿಕೊಂಡು ಗಮನಸೆಳೆದಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಅರಸೀಕೆರೆ ನಗರದ ಹೊರ ವಲಯದಲ್ಲಿರುವ ಗೀಜಿಹಳ್ಳಿ ಕೃಷಿ ಮಾರುಕಟ್ಟೆ ನೂತನ ಪ್ರಾಂಗಣ ಉದ್ಘಾಟನೆ ಮಾಡಿ ಬಳಿಕ ಟೊಮ್ಯಾಟೊ ಹರಾಜಿನಲ್ಲಿ ಭಾಗವಹಿಸಿದ್ದಾರೆ. ರೈತರಿಗೆ ಉತ್ತೇಜನ ನೀಡೋ ಸಲುವಾಗಿ ತಾವೇ ಖುದ್ದು ತರಕಾರಿ ಹರಾಜಿನಲ್ಲಿ ಭಾಗಿಯಾದ ಶಿವಲಿಂಗೇಗೌಡ್ರು, ನೂರು ,ನೂರೈವತ್ತು, ನೂರೆಂಬತ್ತು ಎಂದು ಹರಾಜು ಕೂಗಿ ಟೊಮೆಟೊ ಮಾರಾಟ ಮಾಡಿದರು.

ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 06, 2023 08:31 AM