ಆಷಾಡ ಮಾಸದ ಲಕ್ಷ್ಮೀ ಪೂಜೆ: ವಿಧಾನ ಮತ್ತು ಮಹತ್ವ ತಿಳಿಯಿರಿ
ಆಷಾಡ ಮಾಸದಲ್ಲಿ ಲಕ್ಷ್ಮೀ ಪೂಜೆಯ ಮಹತ್ವವನ್ನು ಡಾ. ಬಸವರಾಜ್ ಗುರೂಜಿ ವಿವರಿಸುತ್ತಾರೆ. ಸೂರ್ಯಾಸ್ತದ ಸಮಯದಲ್ಲಿ ಲಕ್ಷ್ಮೀ ದೇವಿಯ ಫೋಟೋಗೆ ಪೂಜೆ ಸಲ್ಲಿಸುವುದು, ಗೆಜ್ಜೆ ವಸ್ತ್ರ, ದೀಪ, ಅರಿಶಿನ-ಕುಂಕುಮ, ಅಕ್ಷತೆ, ಮತ್ತು ಸಣ್ಣ ನೈವೇದ್ಯ ಅರ್ಪಿಸುವುದು ಈ ಪೂಜೆಯ ವಿಧಾನ. "ಓಂ ಶ್ರೀಂ ಲಕ್ಷ್ಮೀಭ್ಯೋ ನಮಃ" ಮಂತ್ರ ಪಠಿಸುವುದರಿಂದ ಅದೃಷ್ಟ ಮತ್ತು ಆರ್ಥಿಕ ಪ್ರಗತಿ ಸಾಧ್ಯ ಎಂದು ಹೇಳಲಾಗಿದೆ.
ಬೆಂಗಳೂರು, ಜುಲೈ 02: ಆಷಾಡ ಮಾಸದಲ್ಲಿ ಲಕ್ಷ್ಮೀ ಪೂಜೆ ಮಾಡುವುದರಿಂದ ಅದೃಷ್ಟ ಮತ್ತು ಆರ್ಥಿಕ ಪ್ರಗತಿಯಾಗುತ್ತದೆ ಎಂದು ಡಾ. ಬಸವರಾಜ್ ಗುರೂಜಿ ಹೇಳುತ್ತಾರೆ. ಜೂನ್ 22 ರಿಂದ ಜುಲೈ 24 ರವರೆಗೆ ಇರುವ ಈ ಮಾಸದಲ್ಲಿ ಪ್ರತಿ ದಿನ ಸಂಧ್ಯಾಕಾಲದಲ್ಲಿ ಈ ಪೂಜೆಯನ್ನು ಮಾಡಬಹುದು. ಲಕ್ಷ್ಮೀ ದೇವಿಯ ಫೋಟೋವನ್ನು ಬಿಳಿ ಅಥವಾ ಕೆಂಪು ವಸ್ತ್ರದ ಮೇಲೆ ಇಟ್ಟು, ಗೆಜ್ಜೆ ವಸ್ತ್ರದ ಹಾರ, ಜೋಡಿ ದೀಪ, ಅರಿಶಿನ-ಕುಂಕುಮ, ಅಕ್ಷತೆಗಳನ್ನು ಅರ್ಪಿಸಬೇಕು. ಒಂದು ಸಣ್ಣ ನೈವೇದ್ಯವನ್ನೂ ಅರ್ಪಿಸಿ “ಓಂ ಶ್ರೀಂ ಲಕ್ಷ್ಮೀಭ್ಯೋ ನಮಃ” ಎಂದು ಮಂತ್ರ ಪಠಿಸಬೇಕು. 6 ದಿನ ಅಥವಾ 21 ದಿನ ಈ ಪೂಜೆಯನ್ನು ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯಲಿದೆ.
Follow Us
Latest Videos
ಆನೇಕಲ್: ಗ್ರಾಮಕ್ಕೆ ನುಗ್ಗಿ ಕಾಡಾನೆಗಳ ನೈಟ್ ರೌಂಡ್ಸ್! ವಿಡಿಯೋ ವೈರಲ್
ನಾನು ಸಿಎಂ ಆದ್ರೆ ಮಹಿಳೆಯರಿಗೆ 3,000 ರೂ. ಪುರುಷರಿಗೆ 2,000 ರೂ.: ಯತ್ನಾಳ್
ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ
ತರಕಾರಿ ಮಾರುವ ಹುಡುಗನಿಗೆ ಹಾಡಲು ಅವಕಾಶ; ಟ್ರೋಲರ್ಗಳಿಗೆ ಸರಿಗಮಪ ಉತ್ತರ

