ಹಿಂದೂ ಧರ್ಮದಲ್ಲಿ ದಾಂಪತ್ಯ ಜೀವನಕ್ಕೆ ಬಹಳ ಪಾವಿತ್ರ್ಯತೆ ಇದೆ. ಮತ್ತು ಪ್ರಾಮುಖ್ಯ ನೀಡಲಾಗಿದೆ. ಪತಿ-ಪತ್ನಿ ನಡುವೆ ಸರಸ, ವಿರಸ ಇದ್ದೇ ಇರುತ್ತದೆ. ನಮ್ಮ ಹಿರಿಯರು ಹೇಳುತ್ತಾರೆ ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂದು. ಆದರೆ ಈ ಜಗಳ ಇಲ್ಲಿಗೆ ನಿಲ್ಲುತ್ತಿಲ್ಲ. ಹಾಗೆ ಮುಂದುವರೆಯುತ್ತದೆ. ಸಣ್ಣ-ಪುಟ್ಟ ವಿಚಾರಗಳಿಗೆ ಜಗಳವಾಡುತ್ತಾರೆ. ಪ್ರತಿಯೊಂದು ಸಂಬಂಧವೂ ಪ್ರೀತಿ ಮತ್ತು ವಿಶ್ವಾಸದ ತಳಹದಿಯ ಮೇಲೆ ನಿಂತಿದೆ. ಸಂಬಂಧದಲ್ಲಿ ನಂಬಿಕೆ ಇರುವವರೆಗೆ, ಜನರು ಪರಸ್ಪರರ ನ್ಯೂನತೆಗಳನ್ನು ನಿರ್ಲಕ್ಷಿಸುತ್ತಾರೆ ಮತ್ತು ಸಂಬಂಧದಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಹಲವು ಬಾರಿ, ಎಷ್ಟೇ ಪ್ರಯತ್ನಿಸಿದರೂ, ಸಂಬಂಧವು ಮುರಿದು ಮುರಿದುಹೋಗುತ್ತದೆ. ವಿಶೇಷವಾಗಿ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದಲ್ಲಿ ಭಿನ್ನಾಭಿಪ್ರಾಯಗಳು ಬಂದರೆ ನಿಭಾಯಿಸಲು ತುಂಬಾ ಕಷ್ಟವಾಗುತ್ತದೆ. ಈ ಜಗಳ ಒತ್ತಡ ಅಥವಾ ಇನ್ನೀತರ ಕಾರಣದಿಂದ ಆಗುತ್ತದೆ. ಇದಕ್ಕೆ ಏನಾದರು ಸೂಕ್ತ ಪರಿಹಾರವಿದೆಯಾ? ಎಂಬ ಪ್ರಶ್ನೆಗೆ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ.