Daily Devotional: ಇಂದು ಸೂರ್ಯಗ್ರಹಣ ಶನಿ ಪತ ಬದಲಾವಣೆ ಹೇಗೆ?
ಇಂದು ಸೂರ್ಯಗ್ರಹಣ, ಶನಿಭಗವಾನ್ ಕುಂಭದಿಂದ ಮೀನ ರಾಶಿಗೆ ಸಂಚಾರ ಮತ್ತು ಅಮಾವಾಸ್ಯೆ ಒಂದೇ ದಿನ ಸಂಭವಿಸಿದೆ. ಭಾರತದಲ್ಲಿ ಗ್ರಹಣ ಗೋಚರಿಸುವುದಿಲ್ಲ. ಈ ಸಮಯದಲ್ಲಿ ಪ್ರಾರ್ಥನೆ, ಸ್ತೋತ್ರ ಪಠಣ ಮತ್ತು ದೇವರ ಆರಾಧನೆ ಶುಭವೆಂದು ಹೇಳಲಾಗಿದೆ. ಈ ಬಗ್ಗೆ ಡಾ ಬಸವರಾಜ ಗುರೂಜಿ ದ್ವಾದಶ ರಾಶಿಗಳ ಫಲಾಪಲ ಕುರಿತು ಮಾಹಿತಿ ನೀಡಿದ್ದಾರೆ.
ಬೆಂಗಳೂರು, ಮಾರ್ಚ್ 29: ಇಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಶನಿಭಗವಾನ್ ಕುಂಭ ರಾಶಿಯಿಂದ ಮೀನ ರಾಶಿಗೆ ಸಂಚಾರ ಮತ್ತು ಅಮಾವಾಸ್ಯೆ ಒಂದೇ ದಿನ ಸಂಭವಿಸಿವೆ. ಆದರೆ ಭಾರತದಲ್ಲಿ ಈ ಸೂರ್ಯಗ್ರಹಣ ಗೋಚರಿಸುವುದಿಲ್ಲ. ಗ್ರಹಣವು ಸುಮಾರು 2: 20 ನಿಮಿಷಗಳಿಂದ 6: 13 ನಿಮಿಷಗಳವರೆಗೆ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಸಮಯವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಶನಿ ದೇವರ ಸ್ತೋತ್ರ ಪಠಣ, ಹನುಮಾನ್ ಚಾಲೀಸಾ, ಗಣಪತಿ ಸ್ತೋತ್ರ ಪಠಣ ಮತ್ತು ದೀಪಾರಾಧನೆ ಮಾಡುವುದು ಶುಭಕರವಾಗಿರಲಿದೆ.
Published on: Mar 29, 2025 07:09 AM
Latest Videos
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

