Horoscope Today 06 February: ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಇದು ಮಹಾಲಕ್ಷ್ಮಿಯ ಆರಾಧನೆಗೆ ಪ್ರಶಸ್ತ್ಯವಾದ ಶುಭ ದಿನವಾಗಿದ್ದು, ಸಂಕಲ್ಪಗಳನ್ನು ಈಡೇರಿಸಿಕೊಳ್ಳಲು, ಲಲಿತಾ ಸಹಸ್ರನಾಮ ಅಥವಾ ಮಹಾಲಕ್ಷ್ಮಿ ಅಷ್ಟಕ ಪಾರಾಯಣಕ್ಕೆ ಉತ್ತಮವಾಗಿದೆ. ಔದುಂಬರ ಪಂಚಮಿಯಾಗಿರುವುದರಿಂದ ಅತ್ತಿ ಮರದ ಪೂಜೆ ಅಥವಾ ದತ್ತಾತ್ರೇಯನ ಸ್ತೋತ್ರ ಪಠಿಸುವುದು ಶ್ರೇಯಸ್ಕರ. ಧನಿಷ್ಠ ಮಳೆ ಪ್ರಾರಂಭ, ಉಳ್ಳಾಲತಿ ಜಾತ್ರೆ, ಪಂಚಲಿಂಗೇಶ್ವರ ರಥೋತ್ಸವ ಮತ್ತು ಬಸರೀಕಟ್ಟೆಯಲ್ಲಿ ಜನಾರ್ಧನ ರಥೋತ್ಸವದಂತಹ ಪರ್ವ ದಿನವೂ ಆಗಿದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 06, 2026, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾಸನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣ ಪಕ್ಷದ ಪಂಚಮಿ ತಿಥಿ, ಹಸ್ತ ನಕ್ಷತ್ರ, ಧೃತಿ ಯೋಗ ಮತ್ತು ಕೌಲವ ಕರಣಗಳನ್ನೊಳಗೊಂಡಿದೆ.
ಇದು ಮಹಾಲಕ್ಷ್ಮಿಯ ಆರಾಧನೆಗೆ ಪ್ರಶಸ್ತ್ಯವಾದ ಶುಭ ದಿನವಾಗಿದ್ದು, ಸಂಕಲ್ಪಗಳನ್ನು ಈಡೇರಿಸಿಕೊಳ್ಳಲು, ಲಲಿತಾ ಸಹಸ್ರನಾಮ ಅಥವಾ ಮಹಾಲಕ್ಷ್ಮಿ ಅಷ್ಟಕ ಪಾರಾಯಣಕ್ಕೆ ಉತ್ತಮವಾಗಿದೆ. ಔದುಂಬರ ಪಂಚಮಿಯಾಗಿರುವುದರಿಂದ ಅತ್ತಿ ಮರದ ಪೂಜೆ ಅಥವಾ ದತ್ತಾತ್ರೇಯನ ಸ್ತೋತ್ರ ಪಠಿಸುವುದು ಶ್ರೇಯಸ್ಕರ. ಧನಿಷ್ಠ ಮಳೆ ಪ್ರಾರಂಭ, ಉಳ್ಳಾಲತಿ ಜಾತ್ರೆ, ಪಂಚಲಿಂಗೇಶ್ವರ ರಥೋತ್ಸವ ಮತ್ತು ಬಸರೀಕಟ್ಟೆಯಲ್ಲಿ ಜನಾರ್ಧನ ರಥೋತ್ಸವದಂತಹ ಪರ್ವ ದಿನವೂ ಆಗಿದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
