ದರ್ಶನ್​ಗೆ ಮುಖ ತೋರಿಸಲು ಸಾಧ್ಯವಾಗದೇ ಊರು ಬಿಟ್ಟೆ: ಎಲ್ಲವನ್ನೂ ಹೇಳಿದ ಮಲ್ಲಿಕಾರ್ಜುನ್

Edited By:

Updated on: Apr 16, 2026 | 5:31 PM

ನಟ ದರ್ಶನ್ ಅವರಿಗೆ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ್ ಹಲವು ವರ್ಷಗಳಿಂದ ನಾಪತ್ತೆ ಆಗಿದ್ದರು. ಅವರು ಬದುಕಿಲ್ಲ ಎಂಬ ಅಭಿಪ್ರಾಯ ಕೆಲವರಿಗೆ ಇತ್ತು. ಆದರೆ ಈಗ ಮಲ್ಲಿಕಾರ್ಜುನ್ ಏಕಾಏಕಿ ಪ್ರತ್ಯಕ್ಷ ಆಗಿದ್ದಾರೆ. ತಾವು ಊರು ಬಿಟ್ಟು ಹೋಗಿ ಕಣ್ಮರೆ ಆಗಲು ಕಾರಣ ಏನು ಎಂಬುದನ್ನು ಈಗ ವಿವರಿಸಿದ್ದಾರೆ.

ನಟ ದರ್ಶನ್ (Darshan) ಅವರಿಗೆ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ್ ಹಲವು ವರ್ಷಗಳಿಂದ ನಾಪತ್ತೆ ಆಗಿದ್ದರು. ಅವರು ಬದುಕಿಲ್ಲ ಎಂಬ ಅಭಿಪ್ರಾಯ ಕೂಡ ಕೆಲವರಿಗೆ ಇತ್ತು. ಆದರೆ ಈಗ ಮಲ್ಲಿಕಾರ್ಜುನ್ ಅವರು ಏಕಾಏಕಿ ಪ್ರತ್ಯಕ್ಷ ಆಗಿದ್ದಾರೆ. ತಾವು ಊರು ಬಿಟ್ಟು ಹೋಗಿ ಕಣ್ಮರೆ ಆಗಲು ಕಾರಣ ಏನು ಎಂಬುದನ್ನು ಅವರು ಈಗ ವಿವರಿಸಿದ್ದಾರೆ. ‘ತುಂಬಾ ಸಾಲ ಮಾಡಿಕೊಂಡಿದ್ದೆ. ಹಲವಾರು ಬಿಸ್ನೆಸ್​ನಲ್ಲಿ ದುಡ್ಡು ಹಾಕಿ ಕಳೆದುಕೊಂಡಿದ್ದೆ. ತುಂಬ ಸಾಲ ಆಗಿತ್ತು. ಅದನ್ನು ಎದುರಿಸಲು ಸಾಧ್ಯವಾಗದೇ ನಾನು ಊರು ಬಿಡಬೇಕಾಯಿತು. ಇದೆಲ್ಲವೂ ದರ್ಶನ್ ಅವರಿಗೆ ಗೊತ್ತಾದರೆ ಅವರು ಬೇಜಾರು ಮಾಡಿಕೊಳ್ಳುತ್ತಾರೆ ಅಂತ ಅನಿಸಿತು. ಅದಾಗಲೇ ಅವರು ನನಗೆ ಸಹಾಯ ಮಾಡಿದ್ದರು. ಪದೇ ಪದೇ ಅವರನ್ನೇ ಕೇಳೋದು ಸರಿ ಇರಲ್ಲ. ಅವರಿಗೆ ಹೇಗೆ ಮುಖ ತೋರಿಸೋದು ಅಂತ ಮುಜುಗರ ಆಗಿತ್ತು. ಆ ಸಂದರ್ಭದಲ್ಲಿ ಅನಿವಾರ್ಯವಾಗಿ ಊರು ಬಿಡಬೇಕಾದ ಪರಿಸ್ಥಿತಿ ಬಂತು’ ಎಂದು ಮಲ್ಲಿಕಾರ್ಜುನ್ (Darshan Ex Manager Mallikarjun) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us