ಕೋರ್ಟ್​ ಆವರಣದಲ್ಲೂ ದರ್ಶನ್​ಗೆ ಅಭಿಮಾನಿಗಳ ಜೈಕಾರ; ವಿಡಿಯೋ ನೋಡಿ..

|

Updated on: Jun 20, 2024 | 7:03 PM

ರೇಣುಕಾ ಸ್ವಾಮಿ ಮರ್ಡರ್​ ಪ್ರಕರಣದಲ್ಲಿ ಎ2 ಆರೋಪಿ ಆಗಿರುವ ನಟ ದರ್ಶನ್​ ಅವರನ್ನು ಇಂದು (ಜೂ.20) ಕೋರ್ಟ್​ಗೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ದರ್ಶನ್​ಗೆ ಮತ್ತೆ 2 ದಿನ ಪೊಲೀಸ್​ ಕಸ್ಟಡಿ ಮುಂದುವರಿಸಲು ಆದೇಶಿಸಿದ್ದಾರೆ. ಕೋರ್ಟ್​ನಿಂದ ಹೊರಬರುವಾಗ ಅಪ್ಪಟ ಅಭಿಮಾನಿಗಳು ದರ್ಶನ್​ಗೆ ಜೈಕಾರ ಹಾಕಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..

ನಟ ದರ್ಶನ್​ಗೆ ಮತ್ತೆ ಎರಡು ದಿನಗಳ ಕಾಲ ಪೊಲೀಸ್​ ಕಸ್ಟಡಿ ಮುಂದುವರಿಸಲಾಗಿದೆ. ರೇಣುಕಾ ಸ್ವಾಮಿ ಕೊಲೆ (Renuka Swamy Murder) ಕೇಸ್​ನಲ್ಲಿ ಎ2 ಆರೋಪಿ ಆಗಿರುವ ಅವರನ್ನು ಇಂದು (ಜೂನ್​ 20) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ಮುಗಿಸಿ ಹೊರಬರುವಾಗ ದರ್ಶನ್​ರನ್ನು ನೋಡಿ ಅಪ್ಪಟ ಅಭಿಮಾನಿಗಳು (Darshan Fans) ಜೈಕಾರ ಹಾಕಿದ್ದಾರೆ. ಆ ಸಂದರ್ಭದ ವಿಡಿಯೋ ಲಭ್ಯವಾಗಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಎ1 ಆರೋಪಿ ಪವಿತ್ರಾ ಗೌಡ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪ ದರ್ಶನ್​ (Darshan) ಹಾಗೂ ಸಹಚರರ ಮೇಲಿದೆ. ತಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಚಿತ್ರರಂಗದ ಅನೇಕರು ಆಗ್ರಹಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on