ದರ್ಶನ್​ಗೆ ಕೊಡಲು ಬಗೆಬಗೆಯ ತಿಂಡಿ ತಂದ ಆಪ್ತರು; ಆದರೆ ಪೊಲೀಸರು ಮಾಡಿದ್ದೇನು?

| Updated By: ಮದನ್​ ಕುಮಾರ್​

Updated on: Jul 10, 2024 | 4:44 PM

ಕೊಲೆ ಆರೋಪ ಹೊತ್ತಿರುವ ದರ್ಶನ್​ ಅವರಿಗೆ ಜೈಲಿನ ಊಟ ಸೇವಿಸುವುದು ಕಷ್ಟ ಆಗುತ್ತಿದೆ. ಹಾಗಾಗಿ ಹೊರಗಡೆಯಿಂದ ಅವರಿಗಾಗಿ ಬೇಕರಿ ಪದಾರ್ಥಗಳನ್ನು ಆಪ್ತರು ತಂದಿದ್ದಾರೆ. ಆದರೆ ಜೈಲಿನ ಗೇಟಿನಲ್ಲಿ ಪೊಲೀಸರು ತಪಾಸಣೆ ಮಾಡಿದ್ದಾರೆ. ಬೇಕರಿ ತಿಂಡಿಗಳನ್ನು ಒಳಗೆ ತೆಗೆದುಕೊಂಡು ಹೋಗಲು ಪೊಲೀಸರು ಅನುಮತಿ ನೀಡಿಲ್ಲ. ಆ ಸಂದರ್ಭದ ವಿಡಿಯೋ ಇಲ್ಲಿದೆ..

ನಟ ದರ್ಶನ್​ ಅವರಿಗೆ ಜೈಲಿನಲ್ಲಿ ಕಾಲ ಕಳೆಯುವುದು ಕಷ್ಟ ಆಗುತ್ತಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ಆಗಿರುವ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ದರ್ಶನ್​ಗೆ ನೀಡಲು ಅವರ ಆಪ್ತರು ಬಗೆಬಗೆಯ ತಿಂಡಿ ತಿನಿಸುಗಳನ್ನು ತಂದಿದ್ದಾರೆ. ಆದರೆ ಈ ಬೇಕರಿ ಪದಾರ್ಥಗಳನ್ನು ಜೈಲಿನ ಒಳಗೆ ತರಲು ಪೊಲೀಸರು ಅವಕಾಶ ನೀಡಿಲ್ಲ. ಹಲವು ಬಗೆಯ ತಿಂಡಿಗಳಿರುವ ಬಾಕ್ಸ್​ ಅನ್ನು ಪೊಲೀಸರು ಜೈಲಿನ ಗೇಟ್​ನಲ್ಲೇ ತಡೆದಿದ್ದಾರೆ. ‘ಈ ವಸ್ತುಗಳನ್ನು ಬಿಡಲು ಸಾಧ್ಯವಿಲ್ಲ. ಹಣ್ಣು ಮಾತ್ರ ನೀಡಬಹುದು’ ಎಂದು ಖಡಕ್​ ಆಗಿ ಪೊಲೀಸರು ಹೇಳಿದ್ದಾರೆ. ರೇಣುಕಾ ಸ್ವಾಮಿ ಹತ್ಯೆ ಕೇಸ್​ನಲ್ಲಿ ದರ್ಶನ್​ ಜೊತೆ ಪವಿತ್ರಾ ಗೌಡ ಹಾಗೂ ಇತರೆ ಸಹಚರರು ಕೂಡ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on