ಹೊರಗಡೆ ಇದ್ದಾಗ ನಟ ದರ್ಶನ್ ಅವರು ಐಷಾರಾಮಿ ಜೀವನ ನಡೆಸುತ್ತಿದ್ದರು. ಆದರೆ ಜೈಲಿನಲ್ಲಿ ಅವರ ಪರಿಸ್ಥಿತಿ ಕಷ್ಟವಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರದಲ್ಲಿ ದಿನ ಕಳೆಯುತ್ತಿದ್ದಾರೆ. ಅವರನ್ನು ವಿಐಪಿ ಕೊಠಡಿಯಲ್ಲಿ ಇರಿಸಲಾಗಿದೆ. ಆ ಕೊಠಡಿ ಯಾವ ರೀತಿ ಇರುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಆ ಬಗ್ಗೆ ಈಗಾಗಲೇ ಜೈಲು ಶಿಕ್ಷೆ ಮುಗಿಸಿಬಂದಿರುವ ತುರುವನೂರು ಸಿದ್ದಾರೂಢ ಅವರು ಮಾತನಾಡಿದ್ದಾರೆ. ‘8-12 ಅಡಿ ಉದ್ದದ ಕೊಠಡಿ ಕೊಟ್ಟಿದ್ದಾರೆ. ಅದರಲ್ಲಿ ಟಿವಿ ಇದೆ. ಅದು ದರ್ಶನ್ ಅವರಿಗಾಗಿ ಸ್ಪೆಷಲ್ ಆಗಿ ನೀಡಿದ್ದಲ್ಲ. ಅಲ್ಲಿನ ಎಲ್ಲರಿಗೂ ಇರುತ್ತದೆ. 20 ಲೀಟರ್ ಕ್ಯಾನ್ ಹಾಗೂ ಒಂದು ಕುರ್ಚಿ ಇದೆ. ನೆಲದ ಮೇಲೆಯೇ ಮಲಗಬೇಕು. ಜೈಲಿನ ಊಟವನ್ನೇ ನೀಡುತ್ತಿದ್ದಾರೆ. ಮನೆ ಊಟ ನೀಡಿಲ್ಲ. ಕೆಲವು ಪುಸ್ತಕಗಳನ್ನು ದರ್ಶನ್ ಓದುತ್ತಿದ್ದಾರೆ’ ಎಂದು ತುರುವನೂರು ಸಿದ್ದಾರೂಢಾ ಹೇಳಿದ್ದಾರೆ. ಅವರು ಮಾತನಾಡಿದ ವಿಡಿಯೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.