‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ..

| Updated By: ಮದನ್​ ಕುಮಾರ್​

Updated on: Jun 25, 2024 | 11:00 PM

ದೂರದ ಶಹಾಪುರದಿಂದ ಬೆಂಗಳೂರಿಗೆ ಬಂದಿರುವ ಅಭಿಮಾನಿಯೊಬ್ಬರು ದರ್ಶನ್​ ಪರ ಮಾತನಾಡಿದ್ದಾರೆ. ‘ನನಗೆ ದರ್ಶನ್​ 50 ಸಾವಿರ ರೂಪಾಯಿ ನೀಡಿದ್ದರು’ ಎಂದು ಅವರು ಹೇಳಿದ್ದಾರೆ. ‘ದರ್ಶನ್​ ಅವರಿಗೆ ಶಿಕ್ಷೆ ಆಗಬಾರದು’ ಎಂದು ಅಭಿಮಾನಿಯು ಹೇಳಿಕೆ ನೀಡಿದ್ದಾರೆ. ಪರಪ್ಪನ ಅಗ್ರಹಾರದ ಬಳಿ ಅನೇಕ ಅಭಿಮಾನಿಗಳು ಬಂದು ಜಮಾಯಿಸುತ್ತಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ಇರುವ ನಟ ದರ್ಶನ್​ ಅವರನ್ನು ನೋಡಬೇಕು ಎಂಬ ಉದ್ದೇಶದಿಂದ ಅನೇಕ ಅಭಿಮಾನಿಗಳು (Darshan Fans) ಬರುತ್ತಿದ್ದಾರೆ. ಎಲ್ಲರೂ ದರ್ಶನ್​ ಪರವಾಗಿ ಮಾತನಾಡುತ್ತಿದ್ದಾರೆ. ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ ಎಂಬುವವರು ಒಂದು ಕಡೆಯಾದರೆ, ದರ್ಶನ್​ (Darshan) ತಪ್ಪು ಮಾಡಿದ್ದರೂ ಕೂಡ ಶಿಕ್ಷೆ ಆಗಬಾರದು ಅಂತ ಹೇಳುವ ಅಭಿಮಾನಿಗಳು ಇನ್ನೊಂದು ಕಡೆ ಇದ್ದಾರೆ. ಶಹಾಪುರದಿಂದ ಬಂದಿರುವ ಅಭಿಮಾನಿಯೊಬ್ಬರು ಆ ರೀತಿಯಾಗಿ ಮಾತನಾಡಿದ್ದಾರೆ. ‘ಡಿ ಬಾಸ್​ ಮಾತ್ರವಲ್ಲ. ಎಲ್ಲರೂ ತಪ್ಪು ಮಾಡುತ್ತಾರೆ. ಪದೇ ಪದೇ ಡಿ ಬಾಸ್​ ಹೆಸರು ಹೇಳ್ತಾರೆ. ಯಾಕೆಂದರೆ ಎಲ್ಲರಿಗೂ ಅವರನ್ನು ಕಂಡರೆ ಹೊಟ್ಟೆ ಉರಿ’ ಎಂದಿದ್ದಾರೆ ಶಹಾಪುರದಿಂದ ಬಂದಿರುವ ಈ ಅಭಿಮಾನಿ. ಆ ಸಂದರ್ಭದ ವಿಡಿಯೋ ಇಲ್ಲಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿ (Renuka Swamy) ಕೊಲೆ ಆರೋಪದಲ್ಲಿ ದರ್ಶನ್​ಗೆ ನ್ಯಾಯಾಂಗ ಬಂಧನ ಆಗಿದೆ. ಪವಿತ್ರಾ ಗೌಡ ಹಾಗೂ ಇನ್ನುಳಿದ ಸಹಚರರ ಮೇಲೂ ಕೊಲೆ ಆರೋಪ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on