Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ದೇವರಬೆಳಕೆರೆ ಪಿಕಪ್‌ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ತಂದೆ-ಮಗ ಸಾವು, ಮತ್ತೊಬ್ಬ ಬಚಾವ್

ದಾವಣಗೆರೆ: ದೇವರಬೆಳಕೆರೆ ಪಿಕಪ್‌ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ತಂದೆ-ಮಗ ಸಾವು, ಮತ್ತೊಬ್ಬ ಬಚಾವ್

ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಸಾಧು ಶ್ರೀನಾಥ್​

Updated on: Sep 28, 2023 | 7:24 PM

Devarabelakere pickup reservoir: ಹರಿಹರ ತಾಲ್ಲೂಕಿನ ದೇವರ ಬೆಳಕೆರೆ ಪಿಕಪ್‌ ಜಲಾಶಯದ ಹಿನ್ನೀರಿನಲ್ಲಿ ಸ್ನಾನ ಮಾಡುತ್ತಿದ್ದಾಗ ನೀರಿನ ಹರಿವು ಜಾಸ್ತಿಯಾಗಿ ತಂದೆ–ಮಗ ಗುರುವಾರ ಮೃತಪಟ್ಟಿದ್ದಾರೆ. ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆಯ ಚಂದ್ರಪ್ಪ ಹಾಗೂ ಪುತ್ರ ಶೌರ್ಯ ಮೃತರು.

ದಾವಣಗೆರೆ, ಸೆಪ್ಟೆಂಬರ್ 28: ಹರಿಹರ ತಾಲ್ಲೂಕಿನ ದೇವರ ಬೆಳಕೆರೆ ಪಿಕಪ್‌ ಜಲಾಶಯದ ಹಿನ್ನೀರಿನಲ್ಲಿ (Devarabelakere pickup reservoir) ಸ್ನಾನ ಮಾಡುತ್ತಿದ್ದಾಗ ನೀರಿನ ಹರಿವು ಜಾಸ್ತಿಯಾಗಿ ತಂದೆ–ಮಗ ಗುರುವಾರ ಮೃತಪಟ್ಟಿದ್ದಾರೆ. ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆಯ ಚಂದ್ರಪ್ಪ (42) ಹಾಗೂ ಪುತ್ರ ಶೌರ್ಯ(10) ಮೃತಪಟ್ಟವರು.

ಚಂದ್ರಪ್ಪ ಅವರ ಪುತ್ರರಾದ ಶೌರ್ಯ ಹಾಗೂ ಅಥರ್ವ ಇಬ್ಬರೂ ಸ್ನಾನ ಮಾಡುತ್ತಿರುವಾಗ ಏಕಾಏಕಿ ನೀರಿನ ಹರಿವು ಜಾಸ್ತಿಯಾಗಿ ಇಬ್ಬರೂ ಮುಳುಗಿದ್ದಾರೆ. ಶೌರ್ಯನನ್ನು ರಕ್ಷಿಸಲು ಹೋದ ಚಂದ್ರಪ್ಪ ಸೇರಿ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. 13 ವರ್ಷದ ಅಥರ್ವನನ್ನು ಅಲ್ಲಿಯೇ ಇದ್ದ ಸ್ಥಳೀಯ ಯುವಕರೊಬ್ಬರು ರಕ್ಷಿಸಿದ್ದಾರೆ. ಚಂದ್ರಪ್ಪ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ವಿಹಾರಕ್ಕೆಂದು ಮಕ್ಕಳ ಜೊತೆ ಪಿಕಪ್‌ಗೆ ಬಂದಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಇಬ್ಬರ ಶವವನ್ನು ಹೊರ ತೆಗೆದಿದ್ದಾರೆ. ಹರಿಹರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ