Metro Works: ಮೆಟ್ರೋ ಕಾಮಗಾರಿ ವೀಕ್ಷಿಸುವಾಗ ಶೂ ಕಟ್ಟಲು ಬಂದ ಕಾರ್ಮಿಕನನ್ನು ದೂರ ಸರಿಸಿದ ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ

Updated on: Jul 14, 2023 | 7:13 PM

ಲಕ್ಕಸಂದ್ರದ ಬಳಿ ನಡೆಯುತ್ತಿರುವ ಸುರಂಗ ಮಾರ್ಗದ ಕಾಮಗಾರಿಯನ್ನು ಶಿವಕುಮಾರ್ ಪರಿಶೀಲಿಸಿದರು.

ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು ಡೇರಿ ಸರ್ಕಲ್ ನಿಂದ ನಾಗವಾರವರೆಗೆ ನಡೆಯುತ್ತಿರುವ ಸುಮಾರು 21 ಕಿಮೀಗಳಷ್ಟು ಉದ್ದದ ಮೆಟ್ರೋ ಕಾಮಗಾರಿಉ ಪರಿಶೀಲನೆ ನಡೆಸಿದರು. ಶಿವಕುಮಾರ್ ಅವರೊಂದಿಗೆ ಬಿಎಮ್ ಆರ್ ಸಿಎಲ್ ಎಂಡಿ ಅಂಜುಮ್ ಪರ್ವೇಜ್ (Anjum Parvez) ಮತ್ತು ಇತರ ಅಧಿಕಾರಿಗಳನ್ನು ನೋಡಬಹುದು. ಸುರಂಗ ಮಾರ್ಗದ ಕಾಮಗಾರಿ (tunnel works) ವೀಕ್ಷಿಸಲು ಶಿವಕುಮಾರ್ ಭೂಮಿಯನ್ನು ಕೊರೆದ ಸ್ಥಳಕ್ಕೆ ಹೋಗುವಾಗ ಶೂ ಧರಿಸಬೇಕಿತ್ತು. ಒಬ್ಬ ಕಾರ್ಮಿಕ ಶೂ ತಂದು ಅವುಗಳನ್ನು ತೊಡಿಸಲು ಮುಂದಾದಾಗ ಶಿವಕುಮಾರ್ ವ್ಯಕ್ತಿಯನ್ನು ದೂರ ಸರಿಯುವಂತೆ ಹೇಳಿ ತಾವೇ ಶೂ ಕಟ್ಟಿಕೊಳ್ಳುತ್ತಾರೆ. ಲಕ್ಕಸಂದ್ರದ ಬಳಿ ನಡೆಯುತ್ತಿರುವ ಸುರಂಗ ಮಾರ್ಗದ ಕಾಮಗಾರಿಯನ್ನು ಅವರು ಪರಿಶೀಲಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.