Rahul Gandhi Case; ರಾಜಕೀಯವಾಗಿ ಎಷ್ಟೇ ಬದ್ಧ ವೈರತ್ವವಿದ್ದರೂ, ಕುಟುಂಬ ಮತ್ತು ಮನೆತನಗಳ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಬಾರದು: ಪ್ರತಾಪ್ ಸಿಂಹ
ಇನ್ನು ಮುಂದೆ ರಾಜಕೀಯ ನಾಯಕರು ತಮ್ಮ ಎದುರಾಳಿಗಳ ವಿರುದ್ದ ಅವಹೇಳನಕಾರಿಯಾಗಿ ಮಾತಾಡುವುದು, ಹೀಯಾಳಿಸುವುದು ನಿಲ್ಲುವಂತಾಗಲೂ ಈ ಪ್ರಕರಣ ನಾಂದಿಯಾಗಲಿದೆ ಎಂದು ಸಂಸದ ಹೇಳಿದರು.
ಬೆಳಗಾವಿ: ಕಾಂಗ್ರೆಸ್ ಧುರೀಣ ರಾಹುಲ್ ಗಾಂಧಿಯವರನ್ನು (Rahul Gandhi) ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವ ಕುರಿತು ನಗರದಲ್ಲಿಂದು ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್ ಸಿಂಹ (Pratap Simha); ಕೋರ್ಟ್ ಅವರನ್ನು ಮಾನಹಾನಿ ಪ್ರಕರಣವೊಂದರಲ್ಲಿ ದೋಷಿಯೆಂದು (guilty) ಪರಿಗಣಿಸಿ ಜೈಲು ಶಿಕ್ಷೆ ವಿಧಿಸಿರುವುದರಿಂದ ಅನರ್ಹಗೊಳಿಸಲಾಗಿದೆ ಎಂದರು. ಇನ್ನು ಮುಂದೆ ರಾಜಕೀಯ ನಾಯಕರು ತಮ್ಮ ಎದುರಾಳಿಗಳ ವಿರುದ್ದ ಅವಹೇಳನಕಾರಿಯಾಗಿ ಮಾತಾಡುವುದು, ಹೀಯಾಳಿಸುವುದು ನಿಲ್ಲುವಂತಾಗಲೂ ಈ ಪ್ರಕರಣ ನಾಂದಿಯಾಗಲಿದೆ ಎಂದು ಸಂಸದ ಹೇಳಿದರು. ರಾಜಕೀಯವಾಗಿ ಎಷ್ಟೇ ವೈರತ್ವವಿದ್ದರೂ ಯಾವುದೇ ಪಕ್ಷದ ನಾಯಕನ ಕುಟುಂಬ, ಮನೆತನದ ಬಗ್ಗೆ ಕಟುವಾಗಿ ಮತ್ತು ಹಗುರವಾಗಿ ಮಾತಾಡಬಾರದು ಎಂದು ಪ್ರತಾಪ್ ಸಿಂಹ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಕೆಲಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ

