Karnataka Budget Session: ಕರ್ನಾಟಕ ಲೋಕಸೇವಾ ಆಯೋಗದ ವಿರುದ್ಧ ಅನೇಕ ವರದಿಗಳಿದ್ದರೂ ಸರ್ಕಾರ ನಂಬುತ್ತಿಲ್ಲ: ಅರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ

Updated on: Mar 04, 2025 | 6:37 PM

ಅಶೋಕ ಕರ್ನಾಟಕ ಲೋಕಸೇವಾ ಆಯೋಗ ವರದಿ ಬಗ್ಗೆ ಹೇಳಿದಾಗ ಕೆರಳುವ ಶಿವಲಿಂಗೇಗೌಡರು, ಆಯೋಗವೇ ತಪ್ಪು ಮಾಡಿ ಅದೇ ತನಿಖೆ ನಡೆಸಿದರೆ ಅದಕ್ಕೇನು ಬೆಲೆ ಇದ್ದೀತು, ಆಯೋಗವು ಅಯೋಗ್ಯವಾಗಿದೆ, ಅದರ ಕಾರ್ಯಕ್ಷಮತೆ ನಂಬಲರ್ಹವಲ್ಲ ಎಂದು ಚಿಕ್ಕಮಕ್ಕಳು ಸಹ ಹೇಳುತ್ತಿದ್ದಾರೆ, ಅದು ನೀಡಿರುವ ವರದಿಯನ್ನು ಬದಿಗಿಟ್ಟು ಆಯೋಗವನ್ನೇ ರದ್ದು ಮಾಡುವಂತೆ ಹೇಳಿ ಎಂದು ಅಶೋಕ ಅವರಿಗೆ ಹೇಳುತ್ತಾರೆ.

ಬೆಂಗಳೂರು, ಮಾರ್ಚ್ 4: ಸದನದಲ್ಲಿ ಇಂದು ವಿಪಕ್ಷ ನಾಯಕ ಆರ್ ಆಶೋಕ (R Ashoka) ಮತ್ತು ಕಾಂಗ್ರೆಸ್ ಶಾಸಕಕ ಕೆಎಂ ಶಿವಲಿಂಗೇಗೌಡ ನಡುವೆ ಕರ್ನಾಟಕ ಲೋಕಸೇವಾ ಆಯೋಗದ ಕ್ಷಮತೆಗೆ ಸಂಬಂಧಿಸಿದಂತೆ ಬಿಸಿಬಿಸಿ ವಾಗ್ವಾದ ನಡೆಯಿತು. ಆಯೋಗದ ಪ್ರಮಾದಗಳಿಗೆ ಸಂಬಂಧಿಸಿದಂತೆ ಅಶೋಕ ಅವರು ಸರ್ಕಾರವನ್ನು ಕಟಕಟೆಯಲ್ಲಿ ನಿಲ್ಲಿಸಿದರು. ತಾನು ನೀಡುವ ಯಾವ ಸಾಕ್ಷ್ಯವನ್ನೂ ಸರ್ಕಾರ ನಂಬಲು ತಯಾರಿಲ್ಲ, ಎಫ್ಐಆರ್ ಆಗಿರುವ ವಿಷಯ ಹೇಳಿದರೆ ಯಾರೂ ಬೇಕಾದರೂ ಅದನ್ನು ಮಾಡಿಸಬಹುದು ಅಂತ ಸರ್ಕಾರ ಹೇಳುತ್ತದೆ, ಫೋರೆನ್ಸಿಕ್ ಲ್ಯಾಬ್ ನೀಡಿದ 800 ಪುಟಗಳ ವರದಿಯನ್ನೂ ನಂಬಲ್ಲ, ಈಗ ಖುದ್ದು ಕರ್ನಾಟಕ ಲೋಕಸೇವಾ ಅಯೋಗ ನಡೆಸಿದ ತನಿಖೆಯ ವರದಿಯನ್ನೂ ನಂಬಲ್ಲ ಎಂದು ವಿರೋಧ ಪಕ್ಷದ ನಾಯಕ ಹೇಳುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Karnataka Budget Session; ಗ್ರಾಮೀಣ ಭಾಗದ ಕಿರಾಣಾ ಅಂಗಡಿಗಳಲ್ಲೂ ಅವ್ಯಾಹತವಾಗಿ ಮದ್ಯ ಮಾರಾಟ ನಡೆದಿದೆ: ಅರಗ ಜ್ಞಾನೇಂದ್ರ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.