AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿಯ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ದೇವನೂರು ಮಹಾದೇವ ಅವರಿಗೆ ನೀಡಬೇಕು: ಪ್ರತಾಪ್ ಸಿಂಹ

ಈ ಬಾರಿಯ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ದೇವನೂರು ಮಹಾದೇವ ಅವರಿಗೆ ನೀಡಬೇಕು: ಪ್ರತಾಪ್ ಸಿಂಹ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jul 13, 2022 | 5:19 PM

Share

ಪುಸ್ತಕದಲ್ಲಿ ಅಂಬಾನಿ ಮತ್ತು ಅದಾನಿ ಬಗ್ಗೆ ತಪ್ಪು ಮಾಹಿತಿ ನೀಡಿರುವ ಮಹಾದೇವ ಅವರು ಅರ್ಥಶಾಸ್ತ್ರಜ್ಞ ಅನಿಸಿಕೊಳ್ಳುವ ಹಟ ಬಿಟ್ಟು ಸಾಹಿತಿಯಾಗಿರೋದೇ ವಾಸಿ ಎಂದು ಸಂಸದರು ಹೇಳಿದರು.

ಮೈಸೂರು: ದೇವನೂರು ಮಹಾದೇವ (Devanur Mahadeva) ಅವರು ಬರೆದಿರುವ ಆರೆಸ್ಸೆಸ್ ಆಳ ಮತ್ತು ಅಗಲ ಪುಸ್ತಕದ ಬಗ್ಗೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಅವರ ಅಭಿಪ್ರಾಯ ಕೇಳಿದಾಗ, ಇದು ಕೃತಿ ಅಲ್ಲ ವಿಕೃತಿ ಎಂದರು. ಪುಸ್ತಕದಲ್ಲಿ ಅವರು ಒಬ್ಬ ಆರ್ಥಿಕ ತಜ್ಞರ (economist) ಹಾಗೆ ವಿವರಣೆ ನೀಡಿರುವುದನ್ನು ನೋಡಿದರೆ, ಈ ಬಾರಿಯ ಅರ್ಥಶಾಸ್ತ್ರದ ನೊಬೆಲ್ ಪುರಸ್ಕಾರವನ್ನು ಅವರಿಗೆ ನೀಡಬೇಕು ಎಂದು ಪ್ರತಾಪ್ ಸಿಂಹ ಹೇಳಿದರು. ಪುಸ್ತಕದಲ್ಲಿ ಅಂಬಾನಿ ಮತ್ತು ಅದಾನಿ ಬಗ್ಗೆ ತಪ್ಪು ಮಾಹಿತಿ ನೀಡಿರುವ ಮಹಾದೇವ ಅವರು ಅರ್ಥಶಾಸ್ತ್ರಜ್ಞ ಅನಿಸಿಕೊಳ್ಳುವ ಹಟ ಬಿಟ್ಟು ಸಾಹಿತಿಯಾಗಿರೋದೇ ವಾಸಿ ಎಂದು ಸಂಸದರು ಹೇಳಿದರು.

ಇದನ್ನೂ ಓದಿ:  ‘ಎಂಥಾ ಮೂರ್ಖ ಪ್ರಶ್ನೆ ಇದು’; ಆನ್​ಲೈನ್ ಸಂದರ್ಶನದಲ್ಲಿ ವಿಡಿಯೋ ಆನ್​ ಆಗಿದ್ದು ತಿಳಿಯದೇ ಯುವತಿ ಬೈದ ದೃಶ್ಯ ಇದೀಗ ವೈರಲ್