Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವು ಸಿನಿಮಾ ಹೀರೋ, ಇವರೇ ನಿಜವಾದ ಹೀರೋ: ಹೆಮ್ಮೆಯ ಕನ್ನಡತಿ ಬಗ್ಗೆ ಧ್ರುವ ಸರ್ಜಾ ಮಾತು

ನಾವು ಸಿನಿಮಾ ಹೀರೋ, ಇವರೇ ನಿಜವಾದ ಹೀರೋ: ಹೆಮ್ಮೆಯ ಕನ್ನಡತಿ ಬಗ್ಗೆ ಧ್ರುವ ಸರ್ಜಾ ಮಾತು

ಮದನ್​ ಕುಮಾರ್​
|

Updated on: Feb 22, 2025 | 8:28 PM

ಇಡೀ ನಾಡನ್ನು ಹಸಿರಾಗಿಸಲು ಪರಿಸರ ಪ್ರೇಮಿ ಸರಸ್ವತಿ ಅವರು ಮಾಡಿದ ಕೆಲಸವನ್ನು ಗುರುತಿಸಲಾಗಿದೆ. ಅವರಿಗೆ ಹೆಮ್ಮೆಯ ಕನ್ನಡತಿ ಪ್ರಶಸ್ತಿ ನೀಡಲಾಗಿದೆ. ಈ ವೇಳೆ ಸಾಧಕಿ ಸರಸ್ವತಿ ಅವರು ಮಾತನಾಡಿದರು. ಅವರಿಗೆ ಈ ಪ್ರಶಸ್ತಿ ನೀಡಿದ ಟಿವಿ9 ವಾಹಿನಿಗೆ ಶರವಣನ್ ಮತ್ತು ಧ್ರುವ ಸರ್ಜಾ ಅವರು ಧನ್ಯವಾದ ಹೇಳಿದ್ದಾರೆ.

ಪರಿಸರ ಪ್ರೇಮಿ ಸರಸ್ವತಿ ಅವರಿಗೆ ‘ಟಿವಿ9 ಹೆಮ್ಮೆಯ ಕನ್ನಡತಿ’ ಪ್ರಶಸ್ತಿ ಸಿಕ್ಕಿದೆ. ಈ ವೇದಿಕೆಯಲ್ಲಿ ನಟ ಧ್ರುವ ಸರ್ಜಾ ಅವರು ಮಾತನಾಡಿದ್ದಾರೆ. ‘ಹೆಮ್ಮೆಯ ಕನ್ನಡತಿ ಎಂದರೆ.. ನಾವು ತೆರೆ ಮೇಲೆ ಮಾತ್ರ ಹೀರೋ. ರಿಯಲ್ ಲೈಫ್​ನಲ್ಲಿ ಇವರೇ ಹೀರೋ. ಇಂಥ ಕಾರ್ಯಕ್ರಮ ಮಾಡಿ ಪ್ರೋತ್ಸಾಹ ನೀಡುತ್ತಿರುವ ಟಿವಿ9 ವಾಹಿನಿಗೆ ಆಲ್​ ದಿ ಬೆಸ್ಟ್​’ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ‘ಕೆಡಿ’ ಸಿನಿಮಾದ ಡೈಲಾಗ್ ಕೂಡ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.