ತಾಂಡದಲ್ಲಿ ದೀಪಾವಳಿ ಸಂಭ್ರಮ;ಬೆಟ್ಟಹತ್ತಿ ಹೂ ತಂದು ದೇವಸ್ಥಾನದ ಎದುರು ನೃತ್ಯ

ಗಜೇಂದ್ರಗಡ(Gajendragad) ತಾಂಡಾದಲ್ಲಿನ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಇಲ್ಲಿ ಹಲವು ವರ್ಷದಿಂದ ವಿಶಿಷ್ಠವಾಗಿ ದೀಪಾವಳಿ ಆಚರಿಸುವ ಮೂಲಕ ತಮ್ಮ ಗತಕಾಲದ ಸಂಪ್ರದಾಯವನ್ನು ಸಾಂಪ್ರದಾಯಿಕ ಉಡುಗೆತೊಟ್ಟು ಸಂಭ್ರಮದಿಂದ ಮೆಲಕು ಹಾಕುತ್ತಾರೆ. ಎಲ್ಲ ಯುವತಿಯರು ಸೇರಿ ಸಮೀಪದ ಬೆಟ್ಟಕ್ಕೆ ಹೋಗಿ ಲಂಬಾಣಿ ಸಾಹಿತ್ಯದ ಹಾಡಿನೊಂದಿಗೆ ಹೂ ಹರಿದುಕೊಂಡು ಬರುತ್ತಾರೆ.

ತಾಂಡದಲ್ಲಿ ದೀಪಾವಳಿ ಸಂಭ್ರಮ;ಬೆಟ್ಟಹತ್ತಿ ಹೂ ತಂದು ದೇವಸ್ಥಾನದ ಎದುರು ನೃತ್ಯ
| Edited By: Kiran Hanumant Madar

Updated on: Nov 14, 2023 | 8:56 PM

ಗದಗ, ನ.14: ಜಿಲ್ಲೆಯ ಗಜೇಂದ್ರಗಡ(Gajendragad) ತಾಂಡಾದಲ್ಲಿನ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಇಲ್ಲಿ ಹಲವು ವರ್ಷದಿಂದ ವಿಶಿಷ್ಠವಾಗಿ ದೀಪಾವಳಿ ಆಚರಿಸುವ ಮೂಲಕ ತಮ್ಮ ಗತಕಾಲದ ಸಂಪ್ರದಾಯವನ್ನು ಸಾಂಪ್ರದಾಯಿಕ ಉಡುಗೆತೊಟ್ಟು ಸಂಭ್ರಮದಿಂದ ಮೆಲಕು ಹಾಕುತ್ತಾರೆ. ಎಲ್ಲ ಯುವತಿಯರು ಸೇರಿ ಸಮೀಪದ ಬೆಟ್ಟಕ್ಕೆ ಹೋಗಿ ಲಂಬಾಣಿ ಸಾಹಿತ್ಯದ ಹಾಡಿನೊಂದಿಗೆ ಹೂ ಹರಿದುಕೊಂಡು ಬರುತ್ತಾರೆ. ನಂತರ ಸಗಣಿಯಿಂದ ಹಟ್ಟೆವ್ವನನ್ನು(ಸಗಣಿಯಿಂದ) ತಯಾರಿಸಿ ಮನೆ ಬಾಗಿಲಿಗೆ ಇಟ್ಟು ಪೂಜಿಸುತ್ತಾರೆ. ನಂತರ ತಾಂಡಾದ ಸೇವಾಲಾಲ್ ದೇವಸ್ಥಾನದ ಎದುರು ಎಲ್ಲರೂ ಸೇರಿ ನೃತ್ಯಮಾಡಿ ಸಂಭ್ರಮಿಸುತ್ತಾರೆ. ನೃತ್ಯದ ನಂತರ ಒಬ್ಬರನ್ನೊಬ್ರು ತಬ್ಬಿಕೊಂಡು ಕಣ್ಣೀರಿಡುತ್ತಾರೆ. ಬರುವ ವರ್ಷದ ದೀಪಾವಳಿಯೊಳಗೆ ಮದುವೆಯಾಗುವ ಯುವತಿಯರು, ಗೆಳತಿಯರ ನೆನೆದು ಅಳುತ್ತಾರೆ. ಇನ್ನು ಈ ಕುರಿತು ಯುವತಿ ಸರಸ್ವತಿ ಎಂಬುವವರು ‘ಇಡೀ ತಾಂಡಾದ ಮನೆ, ಮನದಲ್ಲಿ ದೀಪಾವಳಿ ಹಬ್ಬದ ಸಂಭ್ರಮದಿಂದ ಮಾಡುತ್ತೇವೆ ಎಂದು ದೀಪಾವಳಿ ಸಡಗರದ ಬಗ್ಗೆ ಹೇಳಿದರು. ದೀಪದ ಹಬ್ಬ ದೀಪಾವಳಿ ಗಜೇಂದ್ರಗಡ ತಾಂಡಾ ಜನರ ಪಾಲಿಗೆ ಮಾತ್ರ ವಿಶಿಷ್ಠವಾಗಿದೆ. ಒಟ್ಟಿನಲ್ಲಿ ಈ ಬುಡಕಟ್ಟು ಜನಾಂಗದ ವಿಶಿಷ್ಠ ಆಚರಣೆ ಮಾತ್ರ ನಾಡಿನಲ್ಲಿನ ವಿವಿಧತೆಯಲ್ಲಿನ ಏಕತೆ ಸಾರುವಂತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow us
ಉತ್ತರಕಾಶಿ: ಸಾವು ಗೆದ್ದು ಬಂದ ಕಾರ್ಮಿಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಉತ್ತರಕಾಶಿ: ಸಾವು ಗೆದ್ದು ಬಂದ ಕಾರ್ಮಿಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಆರೋಪ ಮುಕ್ತನಾಗದ ಹೊರತು ಸದನಕ್ಕೆ ಕಾಲಿಡಲ್ಲ, ಸಾಬೀತಾದರೆ ರಾಜೀನಾಮೆ: ಪಾಟೀಲ್
ಆರೋಪ ಮುಕ್ತನಾಗದ ಹೊರತು ಸದನಕ್ಕೆ ಕಾಲಿಡಲ್ಲ, ಸಾಬೀತಾದರೆ ರಾಜೀನಾಮೆ: ಪಾಟೀಲ್
ಕಷ್ಟಪಟ್ಟು ಕನ್ನಡ ಓದಿದ ಮೈಕಲ್ ಅಜಯ್; ಇಲ್ಲಿದೆ ವಿಡಿಯೋ
ಕಷ್ಟಪಟ್ಟು ಕನ್ನಡ ಓದಿದ ಮೈಕಲ್ ಅಜಯ್; ಇಲ್ಲಿದೆ ವಿಡಿಯೋ
ವಿನೋದ್ ರಾಜ್ ಜೊತೆಗಿನ ತಮ್ಮ ಬಂಧದ ಬಗ್ಗೆ ಶಿವಣ್ಣ ಮಾತು
ವಿನೋದ್ ರಾಜ್ ಜೊತೆಗಿನ ತಮ್ಮ ಬಂಧದ ಬಗ್ಗೆ ಶಿವಣ್ಣ ಮಾತು
ರಾಜೀನಾಮೆ ನೀಡುತ್ತೇನೆಂದ ಬಿಅರ್ ಪಾಟೀಲ್ ಪತ್ರ ಸಿದ್ದರಾಮಯ್ಯಗೆ ಸಿಕ್ಕಿಲ್ಲ?
ರಾಜೀನಾಮೆ ನೀಡುತ್ತೇನೆಂದ ಬಿಅರ್ ಪಾಟೀಲ್ ಪತ್ರ ಸಿದ್ದರಾಮಯ್ಯಗೆ ಸಿಕ್ಕಿಲ್ಲ?
ಅಂತಿಮ ಹಂತದಲ್ಲಿ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಚರಣೆ
ಅಂತಿಮ ಹಂತದಲ್ಲಿ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಚರಣೆ
12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಹಿಡಿದ ಉರಗರಕ್ಷಕ
12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಹಿಡಿದ ಉರಗರಕ್ಷಕ
ಪ್ರತಾಪ್​ ಚಾಲಾಕಿತನಕ್ಕೆ ಇನ್ನೊಂದು ಸಾಕ್ಷಿ; ಬಿಕ್ಕಿ ಬಿಕ್ಕಿ ಅತ್ತ ನಮ್ರತಾ
ಪ್ರತಾಪ್​ ಚಾಲಾಕಿತನಕ್ಕೆ ಇನ್ನೊಂದು ಸಾಕ್ಷಿ; ಬಿಕ್ಕಿ ಬಿಕ್ಕಿ ಅತ್ತ ನಮ್ರತಾ
ಸಿದ್ದರಾಮಯ್ಯ ನಡೆಸಿದ ಜನಸ್ಪಂದನೆ ಕಾರ್ಯಕ್ರಮ ಮೆಚ್ಚಿ ಹೊಗಳಿದ ಕುಮಾರಸ್ವಾಮಿ
ಸಿದ್ದರಾಮಯ್ಯ ನಡೆಸಿದ ಜನಸ್ಪಂದನೆ ಕಾರ್ಯಕ್ರಮ ಮೆಚ್ಚಿ ಹೊಗಳಿದ ಕುಮಾರಸ್ವಾಮಿ
ಕೋರ್ಟ್ ಹೋಗದಿರುವಂತೆ ಯತ್ನಾಳ್​ ಗೆ ಹೇಳುವುದು ಸಾಧ್ಯವೇ? ಸಿದ್ದರಾಮಯ್ಯ
ಕೋರ್ಟ್ ಹೋಗದಿರುವಂತೆ ಯತ್ನಾಳ್​ ಗೆ ಹೇಳುವುದು ಸಾಧ್ಯವೇ? ಸಿದ್ದರಾಮಯ್ಯ