ತುಂಬಿದ ಸಭೆಯಲ್ಲಿ ಶಿವಕುಮಾರ್ ತನ್ನನ್ನು ಗದರುತ್ತಾರೆ ಅಂತ ಮೊಹಮ್ಮದ್ ನಲಪಾಡ್ ಭಾವಿಸಿರಲಿಲ್ಲವೇನೋ?

ಕಾಂಗ್ರೆಸ್ ಕಾರ್ಯಕರ್ತರು ಬಂಡಾಯ ಪ್ರವೃತ್ತಿ ಪ್ರದರ್ಶಿಸಿದರೆ, ಹೇಳಿದ್ದನ್ನು ಮಾಡದಿದ್ದರೆ ಅಂಥವರನ್ನು ಸರಿದಾರಿಗೆ ತರುವ ಕಲೆ ಶಿವಕುಮಾರ್ ಅವರಿಗೆ ಚೆನ್ನಾಗಿ ಗೊತ್ತು. ಆದರೆ ಅವರ ತುಂಬಿದ ಸಭೆಯಲ್ಲಿ ಗದರುತ್ತಾರೆ ಅಂತ ಪ್ರಾಯಶಃ ನಲಪಾಡ್ ಭಾವಿಸಿರಲಿಲ್ಲ. ಶಿವಕುಮಾರ್ ಗದರಿದಾಗ ಅವರ ಮುಖ ಇಂಗು ತಿಂದ ಮಂಗನಂತಾಗಿದ್ದನ್ನು ಎಲ್ಲರೂ ನೋಡಿದರು.

ತುಂಬಿದ ಸಭೆಯಲ್ಲಿ ಶಿವಕುಮಾರ್ ತನ್ನನ್ನು ಗದರುತ್ತಾರೆ ಅಂತ ಮೊಹಮ್ಮದ್ ನಲಪಾಡ್ ಭಾವಿಸಿರಲಿಲ್ಲವೇನೋ?
|

Updated on: Jul 11, 2024 | 3:20 PM

ಬೆಂಗಳೂರು: ಪಕ್ಷದ ಅಧ್ಯಕ್ಷ ಯಾವುದಾದರೂ ಸೂಚನೆ ನೀಡಿದರೆ ಅದನ್ನು ಕಾರ್ಯಕರ್ತರು ಚಾಚೂ ತಪ್ಪದೆ ಪಾಲಿಸುತ್ತಾರೆ. ಅದರೆ ಕೆಲವರಿಗೆ ಪಾಲಿಸದಿದ್ದರೆ ಏನಾದೀತು ಎಂಬ ಧೋರಣೆ. ರಾಜ್ಯ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಮತ್ತು ಕೋಲಾರದ ಒಬ್ಬ ಕಾರ್ಯಕರ್ತ-ಇವರಿಬ್ಬರು; ಡಿಕೆ ಶಿವಕುಮಾರ್ ವಿಧಾನಸೌಧದಲ್ಲಿ ಬ್ಯಾನರ್ ಗಳನ್ನು ಕಟ್ಟಿಕೂಡದೆಂದು ಹೇಳಿದ್ದರೂ ಅವರ ಮಾತು ಉಲ್ಲಂಘಿಸಿ ಬ್ಯಾನರ್ ಕಟ್ಟಿಸಿದ್ದಾರೆ. ನಂತರ ನಡೆದ ಸಭೆಯೊಂದರಲ್ಲಿ ಶಿವಕುಮಾರ್ ಎಲ್ಲರೆದುರೇ ಮೊಹಮ್ಮದ್ ನಲಪಾಡ್ ನ ನೀರಿಳಿಸಿದರು. ಬ್ಯಾನರ್ ಕಟ್ಟಕೂಡದು ಅಂತ ಹೇಳಿದರೂ ಯಾಕಯ್ಯ ಕಟ್ದೆ? ಅವನು ಇನ್ನೊಬ್ಬ ಕೋಲಾರದವನೆಲ್ಲಿ? ನಿನ್ನ ಮತ್ತು ಅವನ ವಿರುದ್ಧ ನಾನೇ ಕೇಸ್ ಹಾಕಿಸ್ತಿದ್ದೀನಿ ಎಂದು ಗದರಿದರು. ಶಿವಕುಮಾರ್ ಕೋಪ ಕಂಡು ಬೆಚ್ಚಿ ಬೀಳುವ ನಲಪಾಡ್ ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆಗೆ ಮಣ್ಣಾಗಲಿಲ್ಲ ಅಂತ ಹೇಳುವಹಾಗೆ, ಮುಗುಳ್ನಗುತ್ತಾ ತನ್ನ ಸೀಟಿನಲ್ಲಿ ಬಂದು ಕೂರುತ್ತಾರೆ. ಕೂತ ಮೇಲೂ ಗದರುವುದನ್ನು ಶಿವಕುಮಾರ್ ಮುಂದುವರಿಸಿದಾಗ ನಲಪಾಡ್ ತನಗಾದ ಅವಮಾನಕ್ಕೆ ಮುಖ ಮುಚ್ಚಿಕೊಳ್ಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಟ್ ಕಾಯಿನ್ ಪ್ರಕರಣದಲ್ಲಿ ಯುವ ಕಾಂಗ್ರೆಸ್ ನಾಯಕನಿಗೆ ಶಾಕ್; ವಿಚಾರಣೆಗೆ ಹಾಜರಾದ ಮೊಹಮ್ಮದ್ ನಲಪಾಡ್

Follow us
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ
ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ