AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ರೇಸ್​ನಲ್ಲಿರುವ ಡಿಕೆ ಶಿವಕುಮಾರ್​ಗೆ ಅಭಯ!? ಬಲಗಡೆಯಿಂದ ಹೂ ನೀಡಿದ ಹಾಸನಾಂಬೆ

ಸಿಎಂ ರೇಸ್​ನಲ್ಲಿರುವ ಡಿಕೆ ಶಿವಕುಮಾರ್​ಗೆ ಅಭಯ!? ಬಲಗಡೆಯಿಂದ ಹೂ ನೀಡಿದ ಹಾಸನಾಂಬೆ

Ganapathi Sharma
|

Updated on: Oct 15, 2025 | 9:30 AM

Share

ಡಿಸಿಎಂ ಡಿಕೆ ಶಿವಕುಮಾರ್ ಮಂಗಳವಾರ ರಾತ್ರಿ ಪತ್ನಿ ಸಮೇತ ಹಾಸನಾಂಬಾ ಕ್ಷೇತ್ರಕ್ಕೆ ಭೇಟಿ ನೀಡಿ ಹಾಸನಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಹಾಸನಾಂಬೆ ದೇವಿ ಎರಡೆರಡು ಬಾರಿ ಬಲಗಡೆಯಿಂದ ಹೂವು ನೀಡಿದ್ದಾಳೆ. ಇದರಿಂದ, ದೇವಿಯ ಅಭಯ ಶಿವಕುಮಾರ್​ಗೆ ಸಿಕ್ಕಿತೇ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಹಾಸನ, ಅಕ್ಟೋಬರ್ 15: ಒಂದೆಡೆ ರಾಜ್ಯ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ಮುನ್ನೆಲೆಗೆ ಬಂದಿದ್ದರೆ ಮತ್ತೊಂದೆಡೆ, ಮಂಗಳವಾರ ರಾತ್ರಿ ಡಿಸಿಎಂ ಡಿಕೆ ಶಿವಕುಮಾರ್ ಹಾಸನಾಂಬಾ ಕ್ಷೇತ್ರಕ್ಕೆ ಭೇಟಿ ನೀಡಿ ಹಾಸನಾಂಬೆಯ ದರ್ಶನ ಪಡೆದರು. ಡಿ.ಕೆ.ಶಿವಕುಮಾರ್​ ಪೂಜೆ ವೇಳೆ ಹಾಸನಾಂಬೆ ಬಲಗಡೆಯಿಂದ ಹೂವು ನೀಡಿದ್ದಾಳೆ. ಎರಡೆರಡು ಬಾರಿ ಹಾಸನಾಂಬೆ ದೇವಿಯ ಮೇಲಿಂದ ಬಲಗಡೆಯಿಂದ ಹೂವು ಬಿದ್ದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಹುದ್ದೆಯ ರೇಸ್​ನಲ್ಲಿರುವ ಡಿಕೆ ಶಿವಕುಮಾರ್​ಗೆ ಹಾಸನಾಂಬೆ ಅಭಯ ನೀಡಿದಳೇ ಎಂಬ ಪ್ರಶ್ನೆ ಭಕ್ತರಲ್ಲಿ ಮೂಡಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ