ತಿಹಾರ್ ಜೈಲಿಂದ ಹೊರಬಂದಾಗ ಮೆರವಣಿಗೆ ಮಾಡಿಸಿಕೊಳ್ಳಲು ಶಿವಕುಮಾರ್ಗೆ ನಾಚಿಕೆಯಾಗಲಿಲ್ಲವೇ? ಕೆ ಎಸ್ ಈಶ್ವರಪ್ಪ
ತಾನು ಯಾವತ್ತೋ ಉಪ ಮುಖ್ಯಮಂತ್ರಿಯಾದವನು, ಆದರೆ ಅವರು ಈಗಷ್ಟೇ ಆಗಿದ್ದಾರೆ ಮತ್ತು ಮೂರು ಜನ ಅವರ ಪೈಪೋಟಿಗೆ ಬರಲಿದ್ದಾರೆ ಎಂದ ಈಶ್ವರಪ್ಪ, ತಿಹಾರ್ ಜೈಲಿಂದ ಜಾಮೀನು ಪಡೆದು ಹೊರಬಂದಾಗ ಬೆಂಗಳೂರಲ್ಲಿ ಮೆರವಣಿಗೆ ಮಾಡಿಸಿಕೊಳ್ಳಲು ಶಿವಕುಮಾರ್ ಗೆ ನಾಚಿಕೆಯಾಗಲಿಲ್ಲವೇ? ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಗೆದ್ದು ಬಂದಿದ್ರಾ ಅಂತ ಪ್ರಶ್ನಿಸಿದರು.
ಶಿವಮೊಗ್ಗ: ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಪ್ರಹಾರ ಮಡುವುದನ್ನು ಮುಂದುವರಿಸಿದ್ದಾರೆ. ಅವನ ನಡುವೆ ವ್ಯಕ್ತಿಗತ (personal) ಕಾದಾಟ ನಡೆಯುತ್ತಿರುವುದು ಮತ್ತು ಪದ ಬಳಕೆ ಎಲ್ಲೆ ಮೀರುತ್ತಿರುವುದು ನಿಜಕ್ಕೂ ದುರಂತ. ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಈಶ್ವರಪ್ಪನವರು ಶಿವಕುಮಾರ್ ವಿರುದ್ಧ ಏಕಚನದಲ್ಲೇ ದಾಳಿ ನಡೆಸಿ ಅವರ ವಿರುದ್ಧ ರಾಷ್ಟ್ರದ್ರೋಹಿ ಮತ್ತು ಇನ್ನಿತರ ಪದಗಳನ್ನು ಬಳಸಿರುವುದಾಗಿ ಹೇಳಿದರು. ಶಿವಕುಮಾರ್ ಜೈಲಿಗೆ ಹೋಗಿ ಜಾಮಿನು ಪಡೆದು ಹೊರಬಂದವರು, ಪುನಃ ಜೈಲಿಗೆ ಹೋಗೋದು ನಿಶ್ಚಿತ ಎಂದು ಅವರು ಹೇಳಿದರು. ತಾನು ಯಾವತ್ತೋ ಉಪ ಮುಖ್ಯಮಂತ್ರಿಯಾದವನು, ಆದರೆ ಅವರು ಈಗಷ್ಟೇ ಆಗಿದ್ದಾರೆ ಮತ್ತು ಮೂರು ಜನ ಅವರ ಪೈಪೋಟಿಗೆ ಬರಲಿದ್ದಾರೆ ಎಂದ ಈಶ್ವರಪ್ಪ, ತಿಹಾರ್ ಜೈಲಿಂದ ಜಾಮೀನು ಪಡೆದು ಹೊರಬಂದಾಗ ಬೆಂಗಳೂರಲ್ಲಿ ಮೆರವಣಿಗೆ ಮಾಡಿಸಿಕೊಳ್ಳಲು ಶಿವಕುಮಾರ್ ಗೆ ನಾಚಿಕೆಯಾಗಲಿಲ್ಲವೇ? ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಗೆದ್ದು ಬಂದಿದ್ರಾ ಅಂತ ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್

ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್

ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ

ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್
