AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಟೆಗಾರರಿಗೆ ಸಿಎಂ ಡೆಡ್‌ಲೈನ್: ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್

ಬೇಟೆಗಾರರಿಗೆ ಸಿಎಂ ಡೆಡ್‌ಲೈನ್: ಚಾಮರಾಜನಗರವನ್ನು ‘ಕಾಡುಗಳ್ಳ ಮುಕ್ತ’ ಮಾಡಲು ಸರ್ಕಾರದ ಬಿಗ್ ಪ್ಲಾನ್

ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Sep 12, 2026 | 5:18 PM

Share

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಕ್ರಮ ಬಂದೂಕುಗಳ ಸಲ್ಲಿಕೆಗೆ ನವೆಂಬರ್ 1ರವರೆಗೆ ಗಡುವು ನೀಡಿದ್ದಾರೆ. ಈ ನಂತರ ದಾಳಿ ನಡೆಸಿ ಅಕ್ರಮ ಶಸ್ತ್ರಾಸ್ತ್ರಗಳು ಪತ್ತೆಯಾದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಈ ನಿರ್ಧಾರ ಚಾಮರಾಜನಗರದ ಬೇಟೆಗಾರರು ಮತ್ತು ಕಾಡುಗಳ್ಳರಿಗೆ ಮರಣಶಾಸನವಾಗಿದ್ದು, ಜಿಲ್ಲೆಯನ್ನು ಕಾಡುಗಳ್ಳ ಮುಕ್ತಗೊಳಿಸುವ ಗುರಿ ಹೊಂದಿದೆ.

ಚಾಮರಾಜನಗರ, ಸೆ.12: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವವರಿಗೆ ನವೆಂಬರ್ 1ರವರೆಗೆ ಅವುಗಳನ್ನು ಪೊಲೀಸರಿಗೆ ಸರೆಂಡರ್ ಮಾಡಲು ಗಡುವು ನೀಡಿದ್ದಾರೆ. ಈ ದಿನಾಂಕದ ನಂತರ ಅರಣ್ಯ ಅಥವಾ ಪೊಲೀಸ್ ಇಲಾಖೆಯ ದಾಳಿಗಳಲ್ಲಿ ಅಕ್ರಮ ಬಂದೂಕುಗಳು ಪತ್ತೆಯಾದರೆ, ಲೈಸೆನ್ಸ್ ಇಲ್ಲದ ಬಂದೂಕುಗಳನ್ನು ಬೇಟೆಯಾಡಲು ಬಳಸುತ್ತಿರುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ನಿರ್ಧಾರ ರಾಜ್ಯದಾದ್ಯಂತ, ಅದರಲ್ಲೂ ವಿಶೇಷವಾಗಿ ಚಾಮರಾಜನಗರ ಜಿಲ್ಲೆಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಬೇಟೆಗಾರರನ್ನು ಹೊಂದಿರುವ ಜಿಲ್ಲೆಗಳಲ್ಲಿ ಚಾಮರಾಜನಗರ ಅಗ್ರಸ್ಥಾನದಲ್ಲಿದ್ದು, ಇಲ್ಲಿ ಬೇಟೆಯಾಡುವವರ ಮತ್ತು ಅಕ್ರಮ ಮರ ಕಳ್ಳತನದ ದೊಡ್ಡ ಜಾಲ ಸಕ್ರಿಯವಾಗಿದೆ. ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಹನೂರು ಭಾಗದಲ್ಲಿ ಕಾಡುಗಳ್ಳರು ಸಕ್ರಿಯರಾಗಿದ್ದು, ಬೇಟೆಯಾಡುವುದು ಮತ್ತು ಅಕ್ರಮ ಮರ ಕಡಿಯುವುದು ಸಾಮಾನ್ಯವಾಗಿದೆ. ಮುಖ್ಯಮಂತ್ರಿಗಳ ಈ ಕಟ್ಟುನಿಟ್ಟಿನ ಸೂಚನೆಯು ಬೇಟೆಗಾರರಿಗೆ ಆತಂಕ ತಂದಿದೆ. ಹಿಂದೆ ಜಿಂಕೆ, ಕಡವೆ ಮತ್ತು ಕಾಡುಕೋಳಿಗಳಂತಹ ಪ್ರಾಣಿಗಳನ್ನು ಬೇಟೆಯಾಡಲು ಅಕ್ರಮ ಬಂದೂಕುಗಳನ್ನು ಬಳಸಲಾಗುತ್ತಿತ್ತು. ಈಗ ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ಚಾಮರಾಜನಗರವನ್ನು ಕಾಡುಗಳ್ಳ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಮುಂದಾಗಿವೆ. ಈ ದಿಟ್ಟ ಹೆಜ್ಜೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us