AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಡಿಕೆಶಿ ಭೇಟಿ ಬಳಿಕ ಅನಿಲ್ ಕುಂಬ್ಳೆ ಮಾತು

‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಡಿಕೆಶಿ ಭೇಟಿ ಬಳಿಕ ಅನಿಲ್ ಕುಂಬ್ಳೆ ಮಾತು

ರಾಜೇಶ್ ದುಗ್ಗುಮನೆ
|

Updated on:Apr 18, 2025 | 2:38 PM

ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಇಂದು ಡಿಕೆಶಿ ಅವರನ್ನು ಭೇಟಿ ಮಾಡಿದ್ದಾರೆ. ಇದರ ಹಿಂದಿನ ಕಾರಣ ಏನು ಎಂಬುದನ್ನು ಅವರು ರಿವೀಲ್ ಮಾಡಿಲ್ಲ. ಈ ಮಧ್ಯೆ ಅವರು ಹೇಳಿದ ಒಂದು ಮಾರು ಚರ್ಚೆಗೆ ಕಾರಣ ಆಗಿದೆ .

ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಇಂದು (ಏಪ್ರಿಲ್ 18) ಡಿಸಿಎಂ ಡಿಕೆ ಶಿವಕುಮಾರ್ (Dk Shivakumar) ಅವರನ್ನು ಭೇಟಿ ಮಾಡಿದ್ದಾರೆ. ಆ ಬಳಿಕ ಅವರು ಮಾಧ್ಯಮಗಳಿಗೆ ಎದುರಾದರು. ಈ ವೇಳೆ ಅವರಿಗೆ ಆರ್​ಸಿಬಿ ಬಗ್ಗೆ ಹಾಗೂ ಆರ್​ಸಿಬಿ ಈ ಬಾರಿಯಾದರೂ ಕಪ್ ಎತ್ತುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕೆ ಅವರು ಫನ್ ಆಗಿ ಉತ್ತರಿಸಿದ್ದಾರೆ. ‘ನಾವು ಈ ಸೀಸನ್​ನಲ್ಲಿ ಇನ್ನೂ ಬೆಂಗಳೂರಲ್ಲಿ ಗೆದ್ದಿಲ್ಲ. ಕಪ್ ಎತ್ತುತ್ತೇವೆ ಎನ್ನಬೇಡಿ. ಹಾಗೆ ಹೇಳಿದಾಗಲೇ ನಾವು ಕಪ್ ಎತ್ತಿಲ್ಲ. ಐಪಿಎಲ್ ಚೆನ್ನಾಗಿ ನಡೆದುಕೊಂಡು ಬಂದಿದೆ’ ಎಂದಿದ್ದಾರೆ ಅವರು. ಆರ್​ಸಿಬಿ vs ಪಂಜಾಬ್ ವಿರುದ್ಧ ಪಂದ್ಯ ನಡೆಯುತ್ತಿದೆ. ‘ನಾನು ಎರಡೂ ಟೀಂನಲ್ಲಿದ್ದೆ. ಸಮಸ್ಯೆ ಅದೇ’ ಎಂದು ಹೇಳಿದ್ದಾರೆ. ಹೀಗಾಗಿ, ಎರಡೂ ತಂಡಕ್ಕೆ ವಿಶ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Apr 18, 2025 12:59 PM