Ambareesh: ‘ಅಂಬರೀಷ್​​ಗೆ ಕುದುರೆ ಹೆಸರು ಮಾತ್ರ ಮರೆಯುತ್ತಿರಲಿಲ್ಲ’; ದೊಡ್ಡಣ್ಣ

|

Updated on: Mar 27, 2023 | 9:10 AM

ಅಂಬರೀಷ್ ಸ್ಮಾರಕ ಉದ್ಘಾಟನೆಗೊಳ್ಳಲಿದೆ. ಈ ಕಾರಣಕ್ಕೆ ಇಂದಿನ ದಿನ ತುಂಬಾ ವಿಶೇಷ ಎನಿಸಿಕೊಂಡಿದೆ. ಈ ಬಗ್ಗೆ ದೊಡ್ಡಣ್ಣ ಮಾತನಾಡಿದ್ದಾರೆ.

ಇಂದು (ಮಾರ್ಚ್ 27) ಅಂಬರೀಷ್ (Ambareesh) ಅಭಿಮಾನಿಗಳ ಪಾಲಿಗೆ ವಿಶೇಷ ದಿನ. ರೇಸ್​ಕೋರ್ಸ್​ ರಸ್ತೆಗೆ ಅಂಬರೀಷ್ ಹೆಸರನ್ನು ಇಡಲಾಗುತ್ತಿದೆ. ಇದರ ಜೊತೆಗೆ ಅಂಬರೀಷ್ ಸ್ಮಾರಕ ಉದ್ಘಾಟನೆಗೊಳ್ಳಲಿದೆ. ಈ ಕಾರಣಕ್ಕೆ ಇಂದಿನ ದಿನ ತುಂಬಾ ವಿಶೇಷ ಎನಿಸಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ದೊಡ್ಡಣ್ಣ, ‘ರೇಸ್​ಕೋರ್ಸ್​ ರಸ್ತೆಗೆ ಅಂಬರೀಷ್ ಹೆಸರು ಇಡುತ್ತಿರುವುದು ಸೂಕ್ತವಾಗಿದೆ. ಅವರು ಕುದುರೆ ಪ್ರಿಯರಾಗಿದ್ದರು. ಅಂಬರೀಷ್​ಗೆ ಮನುಷ್ಯರ ಹೆಸರು ನೆನಪಿಲ್ಲದೆ ಇರದಿದ್ದರೂ ಕುದುರೆಗೆ ಇಟ್ಟ  ಹೆಸರು ಮರೆಯುತ್ತಿರಲಿಲ್ಲ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us on