ಯಾರಿಗೂ ತೊಂದರೆ ಮಾಡ್ಬೇಡ, ನಾನೇ ನಿಂಜೊತೆ ಬರ್ತೀನೀ ಅಂತ ವೀರಪ್ಪನ್​ಗೆ ಹೇಳಿದ್ರಂತೆ ರಾಜ್​ಕುಮಾರ್

ಅರುಣ್​ ಕುಮಾರ್​ ಬೆಳ್ಳಿ

Updated on: Jul 30, 2025 | 11:20 AM

ಚಾಮರಾಜನಗರವನ್ನು ರಾಜ್​ಕುಮಾರ್ ಸ್ವರ್ಗದ ಹೆಬ್ಬಾಗಿಲು ಎನ್ನುತ್ತಿದ್ದರಂತೆ, ಯಾಕೆ ಅವರಿಗೆ ಗಾಜನೂರು ಅಷ್ಟು ಇಷ್ಟವಾಗುತಿತ್ತು ಅಂತ ಕೇಳಿದರೆ, ಇದು ಅವರ ಹುಟ್ಟೂರು, ಬಾಲ್ಯವನ್ನು ಇಲ್ಲೇ ಕಳೆದಿದ್ದು, ಅವರ ಅಪ್ಪ ಅಮ್ಮ ಇದೇ ಊರಲ್ಲಿದ್ದರು , ಅವರ ತಂದೆ ನಾಟಕ ಕಲಿಸುತ್ತಿದ್ದ ಕಾರಣ ಯಾರೋ ಬಳುವಳಿಯಾಗಿ ಕೊಟ್ಟ ಜಮೀನನ್ನು ತೋಟವನ್ನಾಗಿ ಮಾಡಿಕೊಂಡಿದ್ದರು, ಅಪಹರಣ ಪ್ರಕರಣದ ಅವರು ಇಲ್ಲಿಗೆ ಬರೋದು ನಿಂತಿತು ಎಂದು ಸಂಬಂಧಿ ಹೇಳುತ್ತಾರೆ.

ಚಾಮರಾಜನಗರ, ಜುಲೈ 30: ದಿವಂಗತ ಡಾ ರಾಜ್​ಕುಮಾರ್ ಅವರನ್ನು ದಂತಚೋರ ಮತ್ತು ನರಹಂತಕ ವೀರಪ್ಪನ್ (bandit, poacher Veerappan) ಅಪಹರಿಸಿ 25 ವರ್ಷಗಳ ಕಳೆದಿವೆ. ಅಪಹರಣ ನಡೆದಾಗ ಅಣ್ಣಾವ್ರು ತಮ್ಮ ಹುಟ್ಟೂರು ಗಾಜನೂರಲ್ಲಿದ್ದರು. ಇಲ್ಲಿಂದಲೇ ವೀರಪ್ಪನ್ ಮೇರುನಟನನ್ನು ಕಾಡಿಗೆ ಕರೆದೊಯ್ದಿದ್ದ. ಸಂಬಂಧಿಕರಿಗೆ ಆ ಕರಾಳದಿನ ಈಗಲೂ ಕಣ್ಣಿಗೆ ಕಟ್ಟಿದಂತೆ ನೆನಪಿದೆ. ರಾಜ್ ಕುಮಾರ್ ಅವತ್ತು ತುಂಬಾ ಸಂತೋಷದಲ್ಲಿದ್ದರು, ಸಂಜೆಯವರೆಗೆ ತೋಟದಲ್ಲಿದ್ದು ಮನೆಗೆ ಬಂದು ಟಿವಿ ನೋಡುತ್ತಾ ಕೂತಿದ್ದ ಅಪ್ಪಾಜಿಯವರನ್ನು ವೀರಪ್ಪನ್ ಮತ್ತು ಅವನ ಸಹಚರರು ಬಂದು ಕರೆದೊಯ್ದಿದ್ದರು. ಅಮ್ಮ (ಪಾರ್ವತಮ್ಮ ರಾಜ್​ ಕುಮಾರ್) ತುಂಬಾ ಅಳ್ತಾ ಇದ್ದರು, ಅಪ್ಪಾಜಿಯವರು ವೀರಪ್ಪನ್​​ಗೆ ಯಾರಿಗೂ ತೊಂದರೆ ಮಾಡಬೇಡ, ನಾನೇ ನಿನ್ನ ಜೊತೆ ಬರುತ್ತೇನೆ ಅಂತ ಅವನ ಜೊತೆ ಕಾಡಿಗೆ ಹೋದರು ಎಂದು ಸಂಬಂಧಿಯೊಬ್ಬರು ಹೇಳುತ್ತಾರೆ.

ಇದನ್ನೂ ಓದಿ:  ವಿಷ್ಣುವರ್ಧನ್ ಸಿನಿಮಾ ನೋಡುವಾಗ ವೀರಪ್ಪನ್ ಬಂದ; ರಾಜ್​ಕುಮಾರ್ ಕಿಡ್ನ್ಯಾಪ್ ಘಟನೆ ಹೇಳಿದ ಕುಟುಂಬಸ್ಥರು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.