ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರಿಂದ ಡ್ರಗ್ಸ್ ವಿರುದ್ದ ಜಾಗೃತಿ; ನೋ ಡ್ರಗ್ಸ್ ಎಂದ ನಟ ಗಣೇಶ್
ಬೆಂಗಳೂರು ಪೊಲೀಸರು ನಾಗರಭಾವಿ ಸರ್ಕಲ್ ನಿಂದ ಜ್ಞಾನಭಾರತಿ ಪೊಲೀಸ್ ಠಾಣೆವರೆಗೂ ವಾಕಥಾನ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ವಿಶೇಷವೆಂದರೆ ವಾಕಾಥಾನ್ನಲ್ಲಿ ನಟ ಗಣೇಶ್ (Actor Ganesh) ಕೂಡ ಭಾಗಿಯಾಗಿದ್ದರು. ನೋ ಡ್ರಗ್ಸ್ ಎಂದು ಹೇಳುವ ಮೂಲಕ ನಟ ಗಣೇಶ್ ಪೊಲೀಸರಿಗೆ ಸಾಥ್ ಕೊಟ್ಟಿದ್ದಾರೆ.
ಬೆಂಗಳೂರು, ಜ.08: ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ಡ್ರಗ್ಸ್ ವಿರುದ್ದ ಜಾಗೃತಿ (Drug awareness) ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ನಾಗರಭಾವಿ ಸರ್ಕಲ್ ನಿಂದ ಜ್ಞಾನಭಾರತಿ ಪೊಲೀಸ್ ಠಾಣೆವರೆಗೂ ವಾಕಥಾನ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ವಿಶೇಷವೆಂದರೆ ವಾಕಾಥಾನ್ನಲ್ಲಿ ನಟ ಗಣೇಶ್ (Actor Ganesh) ಕೂಡ ಭಾಗಿಯಾಗಿದ್ದರು. ನೋ ಡ್ರಗ್ಸ್ ಎಂದು ಹೇಳುವ ಮೂಲಕ ನಟ ಗಣೇಶ್ ಪೊಲೀಸರಿಗೆ ಸಾಥ್ ಕೊಟ್ಟಿದ್ದಾರೆ. ವಾಕಾಥಾನ್ನಲ್ಲಿ ನೂರಾರು ಎನ್ಎಸ್ಎಸ್ ಹಾಗೂ ಎನ್ಸಿಸಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್, ಎಸಿಪಿಗಳಾದ ಚಂದನ್, ಭರತ್ ರೆಡ್ಡಿ ಹಾಗೂ ಪಶ್ಚಿಮ ವಿಭಾಗದ ಇನ್ಸ್ ಪೆಕ್ಟರ್ ಗಳು ಭಾಗಿಯಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Loading...
Unable to load recommendations.
Follow Us