ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರಿಂದ ಡ್ರಗ್ಸ್ ವಿರುದ್ದ ಜಾಗೃತಿ; ನೋ ಡ್ರಗ್ಸ್ ಎಂದ ನಟ ಗಣೇಶ್

| Updated By: ಆಯೇಷಾ ಬಾನು

Updated on: Jan 08, 2024 | 10:26 AM

ಬೆಂಗಳೂರು ಪೊಲೀಸರು ನಾಗರಭಾವಿ ಸರ್ಕಲ್ ನಿಂದ ಜ್ಞಾನಭಾರತಿ ಪೊಲೀಸ್ ಠಾಣೆವರೆಗೂ ವಾಕಥಾನ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ವಿಶೇಷವೆಂದರೆ ವಾಕಾಥಾನ್​ನಲ್ಲಿ ನಟ ಗಣೇಶ್ (Actor Ganesh) ಕೂಡ ಭಾಗಿಯಾಗಿದ್ದರು. ನೋ ಡ್ರಗ್ಸ್ ಎಂದು ಹೇಳುವ ಮೂಲಕ ನಟ ಗಣೇಶ್ ಪೊಲೀಸರಿಗೆ ಸಾಥ್ ಕೊಟ್ಟಿದ್ದಾರೆ.

ಬೆಂಗಳೂರು, ಜ.08: ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ಡ್ರಗ್ಸ್ ವಿರುದ್ದ ಜಾಗೃತಿ (Drug awareness) ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ನಾಗರಭಾವಿ ಸರ್ಕಲ್ ನಿಂದ ಜ್ಞಾನಭಾರತಿ ಪೊಲೀಸ್ ಠಾಣೆವರೆಗೂ ವಾಕಥಾನ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ವಿಶೇಷವೆಂದರೆ ವಾಕಾಥಾನ್​ನಲ್ಲಿ ನಟ ಗಣೇಶ್ (Actor Ganesh) ಕೂಡ ಭಾಗಿಯಾಗಿದ್ದರು. ನೋ ಡ್ರಗ್ಸ್ ಎಂದು ಹೇಳುವ ಮೂಲಕ ನಟ ಗಣೇಶ್ ಪೊಲೀಸರಿಗೆ ಸಾಥ್ ಕೊಟ್ಟಿದ್ದಾರೆ. ವಾಕಾಥಾನ್​ನಲ್ಲಿ ನೂರಾರು ಎನ್​ಎಸ್​ಎಸ್ ಹಾಗೂ ಎನ್​ಸಿಸಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್, ಎಸಿಪಿಗಳಾದ ಚಂದನ್, ಭರತ್ ರೆಡ್ಡಿ ಹಾಗೂ ಪಶ್ಚಿಮ ವಿಭಾಗದ ಇನ್ಸ್ ಪೆಕ್ಟರ್ ಗಳು ಭಾಗಿಯಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow us on