Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮೀನು ಒತ್ತುವರಿ; ಕುಮಾರಸ್ವಾಮಿ ಮಟ್ಟಕ್ಕಿಳಿದು ರಾಜೀನಾಮೆ ಕೇಳಲ್ಲ, ಉತ್ತರ ನಿರೀಕ್ಷಿಸುತ್ತೇವೆ: ಚಲುವರಾಯಸ್ವಾಮಿ

ಜಮೀನು ಒತ್ತುವರಿ; ಕುಮಾರಸ್ವಾಮಿ ಮಟ್ಟಕ್ಕಿಳಿದು ರಾಜೀನಾಮೆ ಕೇಳಲ್ಲ, ಉತ್ತರ ನಿರೀಕ್ಷಿಸುತ್ತೇವೆ: ಚಲುವರಾಯಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 18, 2025 | 3:17 PM

ಕುಮಾರಸ್ವಾಮಿ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆಂದು ರಾಜ್ಯ ಸರ್ಕಾರವಾಗಲೀ, ಕಾಂಗ್ರೆಸ್ ನಾಯಕರಾಗಲೀ ದೂರಿದ್ದಲ್ಲ, ಯಾರೋ ಸಾರ್ವಜನಿಕ ಹಿತಾಸಕ್ತಿಯ ಪ್ರಕರಣ ದಾಖಲಿಸಿದ ಬಳಿಕ ಬೆಳಕಿಗೆ ಬಂದಿರುವ ಸಂಗತಿ ಇದು, ಕಾಂಗ್ರೆಸ್ ಯಾವತ್ತೂ ದ್ವೇಷದ ರಾಜಕಾರಣ ಮಾಡಲ್ಲ, ಅವರು ಜಮೀನು ಒತ್ತುವರಿ ಮಾಡಿಕೊಂಡಿದ್ದು ಪ್ರೂವ್ ಆಗಿದೆ, ರಾಜೀನಾಮೆ ನೀಡಬೇಕು ಅಂತ ಹೇಳಿದರೆ ದ್ವೇಷದ ರಾಜಕಾರಣ ಅನಿಸಿಕೊಳ್ಳುತ್ತದೆ ಎಂದು ಚಲುವರಾಯಸ್ವಾಮಿ ಹೇಳಿದರು.

ಬೆಂಗಳೂರು, 18 ಮಾರ್ಚ್: ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಇಷ್ಟು ವರ್ಷಗಳ ಕಾಲ ಬಿಡದಿ ಬಳಿ ಅನಧಿಕೃತವಾಗಿ ಜಮೀನು ಒತ್ತುವರಿ ಮಾಡಿಕೊಂಡಿದ್ದು ಸಾಬೀತಾಗಿದೆ ಮತ್ತು ಒತ್ತುವರಿ ಆಗಿರುವ ಜಮೀನನ್ನು ತೆರವು ಮಾಡಿಸುವಂತೆ ಕೋರ್ಟ್ ಆದೇಶ ಕೂಡ ನೀಡಿದೆ, ಸಣ್ಣ ಪುಟ್ಟ ವಿಷಯಗಳಿಗೆಲ್ಲ ಕಾಂಗ್ರೆಸ್ ಮಂತ್ರಿಗಳ ರಾಜೀನಾಮೆ ಕೇಳುತ್ತಿದ್ದ ಕೇಂದ್ರ ಸಚಿವ ಈಗೇನು ಹೇಳುತ್ತಾರೆ ಎಂದು ಸಚಿವ ಎನ್ ಚಲುವರಾಯಸ್ವಾಮಿ ಪ್ರಶ್ನಿಸಿದರು. ತಾವು ಅವರ ಮಟ್ಟಕ್ಕೆ ಇಳಿಯಲ್ಲ, ಅವರ ಹಾಗೆ ಹೊಟ್ಟೆಯುರಿ ತಮಗಿಲ್ಲ ಮತ್ತು ರಾಜೀನಾಮೆ ಸಹ ಕೇಳಲ್ಲ, ಅದರೆ ಅವರಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತೇವೆ ಎಂದು ಸಚಿವ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Karnataka Budget Session: ಸದನದಲ್ಲಿ ಮುಖ್ಯಮಂತ್ರಿ ಯಾಕಿಲ್ಲವೆಂದ ಅಶ್ವಥ್, ಹುಷಾರಿಲ್ಲವೆಂದು ಕೈಮುಗಿದ ಚಲುವರಾಯಸ್ವಾಮಿ