ಬಸ್ ವ್ಯವಸ್ಥೆ ಮಾಡಿಸುವುದಾಗಿ ಹಣ ಪಡೆದು ಎಸ್ಕೇಫ್; 650ಕ್ಕೂ ಹೆಚ್ಚು ಓಂ ಶಕ್ತಿ ಮಾಲಾಧಾರಿಗಳ ಪರದಾಟ
ಬೆಂಗಳೂರು(Bengaluru) ಉತ್ತರ ತಾಲೂಕಿನ ಹನುಮಂತೇಗೌಡನಪಾಳ್ಯದಲ್ಲಿ 650ಕ್ಕೂ ಹೆಚ್ಚು ಓಂ ಶಕ್ತಿ ಮಾಲಾಧಾರಿಗಳನ್ನು ತಮಿಳುನಾಡಿನ ಓಂಶಕ್ತಿ ದೇವಾಲಯಕ್ಕೆ ಕರೆದೊಯ್ಯುವುದಾಗಿ ಪ್ರತಿ ಮಾಲಾಧಾರಿಯಿಂದ 2,300 ರೂಪಾಯಿ ಹಣ ವಸೂಲಿ ಮಾಡಿದ್ದ ಏಜೆಂಟ್ಗಳು ಪರಾರಿಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ, ಜ.06: ಬಸ್ ವ್ಯವಸ್ಥೆ ಮಾಡಿಸುವುದಾಗಿ ಅರ್ಚಕ ಮಂಜುನಾಥ್ ಎಂಬುವವರ ಪರ 2 ಲಕ್ಷ ರೂ. ಹಣ ಪಡೆದಿದ್ದ ಏಜೆಂಟ್ಗಳು ಎಸ್ಕೇಫ್ ಆಗಿರುವ ಘಟನೆ ಬೆಂಗಳೂರು(Bengaluru) ಉತ್ತರ ತಾಲೂಕಿನ ಹನುಮಂತೇಗೌಡನಪಾಳ್ಯದಲ್ಲಿ ನಡೆದಿದೆ. ಬೆಳಗ್ಗೆ 5 ಗಂಟೆಯಿಂದ ಬಸ್ ಇಲ್ಲದಿದ್ದಕ್ಕೆ 650ಕ್ಕೂ ಹೆಚ್ಚು ಓಂ ಶಕ್ತಿ(Om Shakthi) ಮಾಲಾಧಾರಿಗಳು ಪರದಾಟ ನಡೆಸುವಂತಾಗಿದೆ. ತಮಿಳುನಾಡಿನ ಓಂಶಕ್ತಿ ದೇವಾಲಯಕ್ಕೆ ಕರೆದೊಯ್ಯುವುದಾಗಿ ಪ್ರತಿ ಮಾಲಾಧಾರಿಯಿಂದ 2,300 ರೂಪಾಯಿ ಹಣ ವಸೂಲಿ ಮಾಡಿದ್ದರು. ಆದರೆ, ಇದೀಗ ಪರಾರಿಯಾಗಿದ್ದಾರೆ. ಇದರಿಂದ ವಿಶ್ರಾಂತಿ, ಶೌಚಾಲಯ ವ್ಯವಸ್ಥೆ ಇಲ್ಲದೆ ಮಹಿಳಾ ಮಾಲಾಧಾರಿಗಳು ಪರದಾಟ ನಡೆಸಿದ್ದು, ಮಾದನಾಯಕನಹಳ್ಳಿ ಠಾಣೆ ಸಮೀಪವೇ ಘಟನೆ ನಡೆದ್ರೂ ಪೊಲೀಸರು ಮೌನವಹಿಸಿದ್ದಾರೆ. ಈ ಕುರಿತು ಭಕ್ತರ ಪರದಾಟದ ಬಗ್ಗೆ ಸುದ್ದಿ ಮಾಡಲು ಹೋಗಿದ್ದ ಮಾಧ್ಯಮ ಸಿಬ್ಬಂದಿಗೂ ಅಡ್ಡಿಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಧರ್ಮಸ್ಥಳ ಪ್ರಕರಣ: ಅನಾಮಿಕ ಮುಸುಕುಧಾರಿಯ ಅಸಲಿ ಮುಖ, ಫೋಟೊ ಬಹಿರಂಗ!

ನನ್ನ ಪ್ರತಿಕ್ರಿಯೆ ನಂತರ ಬಿಜೆಪಿ ಪ್ರಕರಣದ ಬಗ್ಗೆ ಮಾತಾಡತೊಡಗಿತು: ಡಿಸಿಎಂ

ಮಾಸ್ಕ್ಮ್ಯಾನ್ ಬಂಧನ: ಕೆಲ ಹೊತ್ತಲ್ಲೇ ಕೋರ್ಟ್ಗೆ ಹಾಜರು ಸಾಧ್ಯತೆ

ವಿರೇಂದ್ರ ಪಪ್ಪಿ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ
