ರಾಜ್ಯ ಸರ್ಕಾರ ನೀಡುತ್ತಿರುವ ಪ್ರತಿ ಅಕ್ಕಿಕಾಳಿನ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿದೆ: ಮುನಿರತ್ನ ನಾಯ್ಡು

ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಬರೀ ಘೋಷಣೆ ಮಾಡಿದೆ ಅಷ್ಟೇ, ಕೋಡೋದಿಕ್ಕೆ ಅದರ ಬಳಿ ಅಕ್ಕಿ ಎಲ್ಲಿದೆ? ಅಕ್ಕಿಯ ಹೆಸರಲ್ಲಿ ಕಾರ್ಡುದಾರರಿಗೆ 5 ಕೇಜಿಗಾಗುವಷ್ಟು ಹಣವನನ್ನು ನೀಡಲಾಗುತ್ತಿದೆ. ಅವರಲ್ಲಿ ಅಕ್ಕಿ ಇಲ್ಲವೇ ಇಲ್ಲ, ಹಾಗಾಗೇ ಜನರಿಗೆ ಹಣ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಮುನಿರತ್ನ ಹೇಳಿದರು.

ರಾಜ್ಯ ಸರ್ಕಾರ ನೀಡುತ್ತಿರುವ ಪ್ರತಿ ಅಕ್ಕಿಕಾಳಿನ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿದೆ: ಮುನಿರತ್ನ ನಾಯ್ಡು
|

Updated on: Jan 08, 2024 | 5:46 PM

ಬೆಂಗಳೂರು: ರಾಮನ ಹೆಸರಲ್ಲಿ ಮಂತ್ರಾಕ್ಷತೆ ಅಂತ ಬಿಜೆಪಿ ನಾಯಕರು (BJP leaders) ಮನೆಮನೆಗಳಿಗೆ ಹಂಚುತ್ತಿರುವುದು ಅನ್ನಭಾಗ್ಯ ಯೋಜನೆಯ ಅಕ್ಕಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಗೇಲಿ ಮಾಡಿರುವುದಕ್ಕೆ ಬಿಜೆಪಿ ಶಾಸಕ ಮುನಿರತ್ನ ನಾಯ್ಡು (Munirathna Naidu) ಖಡಕ್ ತಿರುಗೇಟು ನೀಡಿದ್ದಾರೆ. ಡಿಕೆ ಶಿವಕುಮಾರ್ ಯಾವ ಅಕ್ಕಿಯ ಬಗ್ಗೆ ಮಾತಾಡುತ್ತಿದ್ದಾರೆ ಅಂತ ಅವರಿಗೂ ಗೊತ್ತಿದ್ದಂತಿಲ್ಲ. ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಹಂಚುತ್ತಿದೆಯಾ? ಈಗ ಅವರು ಹಂಚುತ್ತಿರೋದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿ. ಆ ಅಕ್ಕಿಯ ಪ್ರತಿಕಾಳಿನ ಮೇಲೆ ಮೋದಿ ಅವರ ಹೆಸರು ಬರೆದಿದೆ ಎಂದು ರಾಜರಾಜೇಶ್ವರಿನ ನಗರದ ಶಾಸಕ ಹೇಳಿದರು. ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಬರೀ ಘೋಷಣೆ ಮಾಡಿದೆ ಅಷ್ಟೇ, ಕೋಡೋದಿಕ್ಕೆ ಅದರ ಬಳಿ ಅಕ್ಕಿ ಎಲ್ಲಿದೆ? ಅಕ್ಕಿಯ ಹೆಸರಲ್ಲಿ ಕಾರ್ಡುದಾರರಿಗೆ 5 ಕೇಜಿಗಾಗುವಷ್ಟು ಹಣವನನ್ನು ನೀಡಲಾಗುತ್ತಿದೆ. ಅವರಲ್ಲಿ ಅಕ್ಕಿ ಇಲ್ಲವೇ ಇಲ್ಲ, ಹಾಗಾಗೇ ಜನರಿಗೆ ಹಣ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಮುನಿರತ್ನ ಹೇಳಿದರು.

ಮತ್ತಷ್ಟು ವಿಡಿಯೋದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us