Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth Rajkumar: ‘ಸುಮ್ನಿರಿ ಸರ್​, ಅರ್ಜೆಂಟ್​ ಮಾಡಬೇಡಿ’: ಅಪ್ಪು ಸಮಾಧಿ ಬಳಿ ಪೊಲೀಸ್​ ವರ್ಸಸ್​ ಫ್ಯಾನ್ಸ್​ ಮಾತಿನ ಚಕಮಕಿ

Puneeth Rajkumar: ‘ಸುಮ್ನಿರಿ ಸರ್​, ಅರ್ಜೆಂಟ್​ ಮಾಡಬೇಡಿ’: ಅಪ್ಪು ಸಮಾಧಿ ಬಳಿ ಪೊಲೀಸ್​ ವರ್ಸಸ್​ ಫ್ಯಾನ್ಸ್​ ಮಾತಿನ ಚಕಮಕಿ

TV9 Web
| Updated By: ಮದನ್​ ಕುಮಾರ್​

Updated on: Oct 27, 2022 | 5:41 PM

Puneeth Rajkumar Samadhi: ರಾಜ್ಯದ ಮೂಲೆ ಮೂಲೆಗಳಿಂದ ಬರುತ್ತಿರುವ ಜನರು ಅಪ್ಪು ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ನೆಚ್ಚಿನ ನಟನಿಗೆ ನಮನ ಸಲ್ಲಿಸುತ್ತಿದ್ದಾರೆ.

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ ಪುಣ್ಯ ಸ್ಮರಣೆ ಅಂಗವಾಗಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಅಪ್ಪು ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಬರುತ್ತಿರುವ ಜನರು ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ಅಪ್ಪು ಸಮಾಧಿಗೆ (Puneeth Rajkumar Samadhi) ನಮನ ಸಲ್ಲಿಸುತ್ತಿದ್ದಾರೆ. ಬೇಗ ಫೋಟೋ ಕ್ಲಿಕ್ಕಿಸಿಕೊಂಡು ಮುಂದೆ ಹೋಗುವಂತೆ ಸೂಚಿಸಿದ ಪೊಲೀಸರ ಜೊತೆಗೆ ಫ್ಯಾನ್ಸ್​ ಮಾತಿನ ಚಕಮಕಿ ನಡೆಸಿದ್ದಾರೆ. ‘ಸುಮ್ನಿರಿ ಸರ್​, ಅರ್ಜೆಂಟ್​ ಮಾಡಬೇಡಿ. ನಾವು ಪ್ರತಿ ದಿನ ಬರಲ್ಲ’ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.