Farmers wait for Monsoon: ಮಳೆಯಾಗದೆ ಹಾವೇರಿ ಜಿಲ್ಲೆ ರೈತರು ಕಂಗಾಲು, ಎರಡು ದಿನಗಳಲ್ಲಿ ಮಳೆಯಾಗದಿದ್ದರೆ ಬಿತ್ತಿದ್ದೆಲ್ಲ ಹಾಳು!
ಮಾನ್ಸೂನ್ ಈಗಾಗಲೇ ಆರಂಭವಾಗಬೇಕಿತ್ತು, ಇನ್ನೆರಡು ದಿನಗಳಲ್ಲಿ ಮಳೆಯಾಗದಿದ್ದರೆ ಬಿತ್ತಿದ್ದೆಲ್ಲ ನಾಶವಾಗುತ್ತದೆ ಎಂದು ರೈತ ಹೇಳುತ್ತಾರೆ.
ಹಾವೇರಿ: ಒಂದೆಡೆ ಅಕಾಲಿಕ ಮಳೆಯಿಂದ (untimely rains) ಬಾಳೆ, ಮಾವು, ದಾಳಿಂಬೆ ಮೊದಲಾದ ತೋಟಗಾರಿಕಾ ಬೆಳೆಗಳು ಹಾಳಾದರೆ, ಮಳೆಯಾಗದ ಕಾರಣ ಬಿತ್ತಿದ ಬೀಜಗಳು ಮೊಳಕೆಯೊಡೆದರೂ ಒಣಗಿ (withering away) ಹೋಗುತ್ತಿರುವ ಸ್ಥಿತಿ ಮತ್ತೊಂದು ಕಡೆ. ಹಾವೇರಿ ಜಿಲ್ಲೆಯ ರೈತ ಹೇಳುತ್ತಿರುವುದನ್ನು ಕೇಳಿಸಿಕೊಂಡರೆ ಉತ್ತರ ಕರ್ನಾಟಕ ಭಾಗದ ರೈತಾಪಿ ಜನ ಅನುಭವಿಸುತ್ತಿರುವ ಯಾತನೆ ಗೊತ್ತಾಗುತ್ತದೆ. ಮಾನ್ಸೂನ್ (monsoon) ಈಗಾಗಲೇ ಆರಂಭವಾಗಬೇಕಿತ್ತು, ಇನ್ನೆರಡು ದಿನಗಳಲ್ಲಿ ಮಳೆಯಾಗದಿದ್ದರೆ ಬಿತ್ತಿದ್ದೆಲ್ಲ ನಾಶವಾಗುತ್ತದೆ ಎಂದು ರೈತ ಹೇಳುತ್ತಾರೆ. ಮಳೆಯಾಗದ ಸ್ಥಿತಿಯಲ್ಲಿ ಬಿತ್ತನೆ ಕಾರ್ಯ ಮತ್ತೊಮ್ಮೆ ನಡೆಸಬೇಕಾಗುತ್ತದೆ, ಹಾಗಾಗಿ ಬಿತ್ತನೆ ಬೀಜ, ರಸಗೊಬ್ಬರ ಮೊದಲಾದವು ಸಬ್ಸಿಡಿ ದರದಲ್ಲಿ ರೈತರಿಗೆ ಸಿಗುವ ಹಾಗೆ ಕೃಷಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್ ಸ್ಪೈಡಿ ಕ್ಯಾಚ್ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ

