ಉಗ್ರರ ದಾಳಿಗೆ ಬಲಿಯಾದ ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಅಂತ್ಯಕ್ರಿಯೆ ನಡೆದಿದ್ದು, ಅವರ ಅಸ್ತಿಯನ್ನು ಇಂದು ಹರಿದ್ವಾರದ ಗಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಅಸ್ತಿ ವಿಸರ್ಜನೆ ಮಾಡಿದ ಬಳಿಕ ತಮ್ಮ ಮಗನನ್ನು ನೆನೆದು ವಿನಯ್ ಅವರ ತಂದೆ ಬಿಕ್ಕಿ ಬಿಕ್ಕಿ ಅಳುತ್ತಾ ನಿಂತಿರುವ ದೃಶ್ಯ ಎಂಥವರ ಕಣ್ಣನ್ನೂ ತೇವಗೊಳಿಸುತ್ತದೆ. ಹರಿಯಾಣದ ಮೂಲದ ವಿನಯ್ ನರ್ವಾಲ್ ಅವರಿಗೆ ಮದುವೆಯಾಗಿ ಕೇವಲ 1 ವಾರವಾಗಿತ್ತು. ತಮ್ಮ ಪತ್ನಿಯೊಂದಿಗೆ ಕಾಶ್ಮೀರಕ್ಕೆ ಹನಿಮೂನ್ ಹೋಗಿದ್ದರು. ಈ ವೇಳೆ ಲೆಫ್ಟಿನೆಂಟ್ ನರ್ವಾಲ್ ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು.
ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಅಂತ್ಯಕ್ರಿಯೆ ನಡೆದಿದ್ದು, ಅವರ ಅಸ್ತಿಯನ್ನು ಇಂದು ಹರಿದ್ವಾರದ ಗಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಅಸ್ತಿ ವಿಸರ್ಜನೆ ಮಾಡಿದ ಬಳಿಕ ತಮ್ಮ ಮಗನನ್ನು ನೆನೆದು ವಿನಯ್ ಅವರ ತಂದೆ ಬಿಕ್ಕಿ ಬಿಕ್ಕಿ ಅಳುತ್ತಾ ನಿಂತಿರುವ ದೃಶ್ಯ ಎಂಥವರ ಕಣ್ಣನ್ನೂ ತೇವಗೊಳಿಸುತ್ತದೆ. ಹರಿಯಾಣದ ಮೂಲದ ವಿನಯ್ ನರ್ವಾಲ್ ಅವರಿಗೆ ಮದುವೆಯಾಗಿ ಕೇವಲ 1 ವಾರವಾಗಿತ್ತು. ತಮ್ಮ ಪತ್ನಿಯೊಂದಿಗೆ ಕಾಶ್ಮೀರಕ್ಕೆ ಹನಿಮೂನ್ ಹೋಗಿದ್ದರು. ಈ ವೇಳೆ ಲೆಫ್ಟಿನೆಂಟ್ ನರ್ವಾಲ್ ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos