AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಡ್ಗಿಚ್ಚಿನಿಂದ ನಾಶವಾಯ್ತು ಉತ್ತರಾಖಂಡದ ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು

ಕಾಡ್ಗಿಚ್ಚಿನಿಂದ ನಾಶವಾಯ್ತು ಉತ್ತರಾಖಂಡದ ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು

ಸುಷ್ಮಾ ಚಕ್ರೆ
|

Updated on:Jan 15, 2026 | 10:27 PM

Share

ಉತ್ತರಾಖಂಡದ ಚಮೋಲಿ ಆಡಳಿತವು ಹೈ ಅಲರ್ಟ್‌ನಲ್ಲಿದೆ. ನಂದಾ ದೇವಿ ಕಾಡಿನ ಬೆಂಕಿಯನ್ನು ನಂದಿಸಲು ಹೆಲಿಕಾಪ್ಟರ್ ನಿಯೋಜಿಸಲಾಗಿದೆ. ಚಳಿಗಾಲದ ಹಿಮಪಾತದ ಕೊರತೆ ಮತ್ತು ಮಳೆಯ ಕೊರತೆಯೇ ಈ ರೀತಿಯ ಬೆಂಕಿಗೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಅತಿ ಎತ್ತರದ ಪ್ರದೇಶವಾದ್ದರಿಂದ ಇಲ್ಲಿನ ಬೆಂಕಿ ನಂದಿಸಲು ಅತ್ಯಂತ ಕಷ್ಟವಾಗುತ್ತಿದೆ.

ಉತ್ತರಾಖಂಡ, ಜನವರಿ 15: ಉತ್ತರಾಖಂಡದ ನಂದಾ ದೇವಿ ರಾಷ್ಟ್ರೀಯ ಅಭಯಾರಣ್ಯದಲ್ಲಿ ಸತತ 5ನೇ ದಿನವೂ ಬೆಂಕಿ (Fire Accident) ಹೊತ್ತಿ ಉರಿಯುತ್ತಿದೆ. ಅತ್ಯಮೂಲ್ಯವಾದ ಸಸ್ಯ ಸಂಪತ್ತು, ಔಷಧೀಯ ಸಸ್ಯಗಳು ಸುಟ್ಟು ಬೂದಿಯಾಗಿದೆ. ಇಂದು ಇಲ್ಲಿನ ಪರಿಸ್ಥಿತಿಯನ್ನು ನಿರ್ಣಯಿಸಲು ವೈಮಾನಿಕ ಸಮೀಕ್ಷೆಯನ್ನು ನಡೆಸಲಾಯಿತು. ಈ ಕಣಿವೆಯು ಅಪರೂಪದ ಹೂವುಗಳಿಗೆ ಹೆಸರುವಾಸಿಯಾಗಿದೆ. ಲಕ್ಷ್ಮಣ ಗಂಗಾ ಮತ್ತು ಅಲಕನಂದಾ ನದಿಗಳ ನಡುವೆ ಇರುವ, 3500-4200 ಮೀಟರ್ ಎತ್ತರದಲ್ಲಿರುವ UNESCO ವಿಶ್ವ ಪರಂಪರೆಯ ತಾಣ ಇದಾಗಿದೆ.

ಚಳಿಗಾಲದ ಹಿಮಪಾತದ ಕೊರತೆ ಮತ್ತು ಮಳೆಯ ಕೊರತೆಯೇ ಈ ರೀತಿಯ ಬೆಂಕಿಗೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಅತಿ ಎತ್ತರದ ಪ್ರದೇಶವಾದ್ದರಿಂದ ಇಲ್ಲಿನ ಬೆಂಕಿ ನಂದಿಸಲು ಅತ್ಯಂತ ಕಷ್ಟವಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 15, 2026 10:25 PM
Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More