AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ ರಾಜಕೀಯದಲ್ಲಿ 'ಕೋಟಿ' ಸಮರ: 50 ಲಕ್ಷ, 1 ಕೋಟಿ ಹಣ ಹಂಚಿಕೆಯ ಆರೋಪದ ಬಗ್ಗೆ ಚಮನ್ ಸಾಬ್ ಸ್ಫೋಟಕ ಮಾತು!

ದಾವಣಗೆರೆ ರಾಜಕೀಯದಲ್ಲಿ ‘ಕೋಟಿ’ ಸಮರ: 50 ಲಕ್ಷ, 1 ಕೋಟಿ ಹಣ ಹಂಚಿಕೆಯ ಆರೋಪದ ಬಗ್ಗೆ ಚಮನ್ ಸಾಬ್ ಸ್ಫೋಟಕ ಮಾತು!

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Apr 11, 2026 | 9:26 PM

Share

ದಾವಣಗೆರೆ ಉಪಚುನಾವಣೆ ಸಂದರ್ಭದಲ್ಲಿ ಮಾಜಿ ಮೇಯರ್ ಚಮನ್ ಸಾಬ್, ಕೆಲವರ ಅಕ್ರಿಯತೆ ಹಾಗೂ ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಮಾತನಾಡಿದ್ದಾರೆ. ಮೂರು ಬಾರಿ ಎಂಎಲ್‌ಸಿ ಆಗಿದ್ದವರು ಚುನಾವಣೆಯಲ್ಲಿ ಭಾಗಿಯಾಗದಿರುವುದು ಷಡ್ಯಂತ್ರದ ಭಾಗ ಎಂದಿದ್ದಾರೆ. ಟಿಕೆಟ್‌ಗಾಗಿ ಗೊಂದಲ ಸೃಷ್ಟಿ ಮತ್ತು ಹಣಕಾಸಿನ ಆರೋಪಗಳು ಕೇವಲ ಗಾಳಿ ಸುದ್ದಿ ಎಂದು ತಳ್ಳಿಹಾಕಿದ್ದಾರೆ. ಪಕ್ಷವು ಸೂಕ್ತ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ದಾವಣಗೆರೆ, ಏ.11: ಉಪಚುನಾವಣೆ ಕುರಿತು ಮಾಜಿ ಮೇಯರ್ ಚಮನ್ ಸಾಬ್ ಮಹತ್ವದ ಹೇಳಿಕೆ ನೀಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಕೆಲವು ವ್ಯಕ್ತಿಗಳ ಅಸಮರ್ಥ ಕ್ರಿಯೆಯ ಕುರಿತು ಅವರು ಮಾತನಾಡಿದ್ದಾರೆ. ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರೂ, ಲೋಕಸಭೆ ಚುನಾವಣೆ ಹಾಗೂ ಪ್ರಸ್ತುತ ಉಪಚುನಾವಣೆಯಲ್ಲಿ ಸಕ್ರಿಯವಾಗಿ ಭಾಗಿಯಾಗದಿರುವುದನ್ನು ಚಮನ್ ಸಾಬ್ ಷಡ್ಯಂತ್ರ ಎಂದು ಬಣ್ಣಿಸಿದ್ದಾರೆ. ಪಕ್ಷದ ನಿರ್ಧಾರವು ಉತ್ತಮವಾಗಿದೆ ಮತ್ತು ಸಮರ್ಥ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ನಾಯಕರು ಮನೆಗೆ ಭೇಟಿ ನೀಡದಿರುವುದನ್ನು ಮನವೊಲಿಸುವ ಪ್ರಯತ್ನವಾಗಿ ನೋಡಲಾಗದು ಎಂದು ಚಮನ್ ಸಾಬ್ ಸ್ಪಷ್ಟಪಡಿಸಿದ್ದಾರೆ. ಇನ್ನು, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಗೊಂದಲ ಸೃಷ್ಟಿ ಮತ್ತು ಕೆಲ ಮುಸ್ಲಿಂ ಸಮುದಾಯದವರಿಗೆ ಹಣ ನೀಡಿ ಸೋಲಿಸಲು ಪ್ರಯತ್ನಿಸಲಾಯಿತು ಎಂಬ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ. ಇವೆಲ್ಲವೂ ಕೇವಲ ಗಾಳಿ ಸುದ್ದಿಗಳಾಗಿದ್ದು, ಅವುಗಳಿಗೆ ಯಾವುದೇ ಅಧಿಕೃತ ಆಧಾರವಿಲ್ಲ ಎಂದು ಚಮನ್ ಸಾಬ್ ತಿಳಿಸಿದ್ದಾರೆ. ಕಾರ್ಯಕರ್ತರು ಕಾಣದ ಸಂಗತಿಗಳನ್ನು ಪತ್ರಕರ್ತರು ಕಂಡರೆ ಹೇಳಲಿ ಎಂದು ಸವಾಲು ಹಾಕಿದ್ದಾರೆ.

“ಬರೀ ಟಿಕೆಟ್, ಟಿಕೆಟ್ ಎಂದು ತಲೆಗೆ ತುಂಬಿಕೊಂಡು, ವಿನಾಕಾರಣ ಗೊಂದಲ ಸೃಷ್ಟಿ ಮಾಡಿ, ಬೇಜಾರಾಗುವಂತೆ ಮಾಡಿದ್ದಾರೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು, ಜಮೀರ್ ಅಹ್ಮದ್ ಅವರು ಕೆಲ ಮುಸ್ಲಿಂ ಸಮುದಾಯದವರಿಗೆ ಹಣ ನೀಡಿ, ಸೋಲಿಸಲು ಪ್ರಯತ್ನಿಸಿದ್ದಾರೆ ಎಂಬ ಆರೋಪಗಳ ಕುರಿತು ಪತ್ರಕರ್ತರು ಕೇಳಿದಾಗ, “ಕವಿ ಕಾಣದ್ದನ್ನು ರವಿ ಕಂಡ” ಎಂಬ ಗಾದೆಯನ್ನು ಉಲ್ಲೇಖಿಸಿ, ಇವೆಲ್ಲವೂ ಗಾಳಿ ಸುದ್ದಿ ಎಂದು ತಳ್ಳಿಹಾಕಿದ್ದಾರೆ. “ನಮಗೆ ಕಣ್ಣಿಗೆ ಕಂಡಿಲ್ಲ. ನಮಗೂ ಸುದ್ದಿ ಹಂಗೆ ಹಂಗೆ ಮಾಡಿದ್ರಂತೆ, ಇಷ್ಟು ಕೋಟಿ ಕೊಟ್ಟರಂತೆ ಅಂತ ಹೇಳ್ತಾರೆ. ಇವೆಲ್ಲ ಗಾಳಿ ಸುದ್ದಿ. ಇದಕ್ಕೆ ನಮ್ಮಹತ್ತಿರ ಏನು ಅಧಿಕೃತ ದಾಖಲೆ ಇಲ್ಲ” ಎಂದು ಚಮನ್ ಸಾಬ್ ಹೇಳಿದ್ದಾರೆ. ಕ್ಷೇತ್ರದಲ್ಲಿ 50 ಲಕ್ಷ ಅಥವಾ 1 ಕೋಟಿ ನೀಡಿದ ಬಗ್ಗೆ ಕೇಳಿಬರುತ್ತಿರುವ ಸುದ್ದಿಗಳು ಕೇವಲ ಅಂತೆ ಕಂತೆಗಳಾಗಿವೆ, ಅವುಗಳಿಗೆ ಯಾವುದೇ ನೈಜತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆಗಳು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ರಾಜಕೀಯ ಪರಿಸ್ಥಿತಿಯನ್ನು ಮತ್ತಷ್ಟು ಬಿಸಿ ಮಾಡಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us