ಚೈತ್ರಾ ಕುಂದಾಪುರ ವಂಚನೆ ಕೆಲಸ ಕೇವಲ ಮಂಗಳೂರು-ಉಡುಪಿಗೆ ಸೀಮಿತವಾಗಿರದೆ ರಾಜ್ಯಾದ್ಯಂತ ವ್ಯಾಪಿಸಿದಂತಿದೆ!

ಸಿಸಿಬಿ ವಿಚಾರಣೆಯಲ್ಲಿ ಒಂದೊಂದಾಗಿ ವಿಷಯಗಳು ಹೊರಬೀಳುತ್ತಿದ್ದಂತೆಯೇ, ಮಾಧ್ಯಮವರು ಸಲೂನ್ ಮಾಲೀಕ ರಾಮು ಬಳಿ ಹೋಗಿ ವಿವರ ಪಡೆದುಕೊಂಡಿದ್ದಾರೆ. ಇದು ಧನರಾಜ್ ಗೆ ಗೊತ್ತಾಗಿ ಅವನು ತನ್ನ ಸ್ನೇಹಿತ ನೂತನ್ ಎಂಬುವವನಿಂದ ರಾಮು ಫೋನ್ ಮಾಡಿಸಿ ಧಮ್ಕಿ ಹಾಕಿಸಿದ್ದಾನೆ. ರಾಮು ಮತ್ತು ನೂತನ್ ನಡುವೆ ನಡೆದ ಸಂಭಾಷನಣೆಯನ್ನು ಇಲ್ಲಿ ಕೇಳಬಹುದು

ಚೈತ್ರಾ ಕುಂದಾಪುರ ವಂಚನೆ ಕೆಲಸ ಕೇವಲ ಮಂಗಳೂರು-ಉಡುಪಿಗೆ ಸೀಮಿತವಾಗಿರದೆ ರಾಜ್ಯಾದ್ಯಂತ ವ್ಯಾಪಿಸಿದಂತಿದೆ!
|

Updated on: Sep 14, 2023 | 1:18 PM

ಚಿಕ್ಕಮಗಳೂರು: ಚೈತ್ರಾ ಕುಂದಾಪರ (Chaitra Kundapura) ಸಿಸಿಬಿ ಪೊಲೀಸರಿಗೆ ತುಂಬಾನೇ ಕೆಲಸ ನೀಡಿದ್ದಾಳೆ ಅನಿಸುತ್ತೆ. ಯಾಕೆ ಅಂತ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಆಕೆಯ ಕಾರ್ಯಕ್ಷೇತ್ರ ಕೇವಲ ಮಂಗಳೂರು ಉಡುಪಿಗೆ ಸೀಮಿತವಾಗಿರದೆ ರಾಜ್ಯಾದ್ಯಂತ ವಿಸ್ತರಿಸಿದಂತಿದೆ. ಗೋವಿಂದ ಬಾಬು ಪೂಜಾರಿ (Govind Babu Pujari) ಅಥವಾ ಅವರಂಥ ಮತ್ತೊಬ್ಬ ಮಿಕನಿಗೆ ಯಾವುದೋ ಆಮಿಶವೊಡ್ಡಿ ಹಣ ಪೀಕುವ ಉದ್ದೇಶದಿಂದ ಚೈತ್ರಾ ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ಧನ​ರಾಜ್ (Dhanraj) ಹೆಸರಿನ ವ್ಯಕ್ತಿಯ ಮೂಲಕ ಚೆನ್ನನಾಯ್ಕ್ ಎನ್ನುವವನಿಗೆ ಬಿಜೆಪಿ ಕೇಂದ್ರ ಚುನಾವಣಾ ಮಂಡಳಿ ಸದಸ್ಯನ (BJP Election Committee member) ವೇಷ ಹಾಕಿಸಿದ್ದಾಳೆ. ಆ ಸದಸ್ಯನ ಫೋಟೋ ತೆಗದುಕೊಂಡು ಚೆನ್ನ ನಾಯ್ಕ್ ಕಡೂರಲ್ಲಿ ಕ್ಷೌರದ ಅಂಗಡಿ ನಡೆಸುವ ರಾಮು ಎನ್ನುವವರಲ್ಲಿಗೆ ಹೋಗಿ ಬಿಜಪಿ ಸದಸ್ಯನ ಹಾಗೆ ಹೇರ್ ಕಟ್ ಮಾಡಿಸಿಕೊಂಡು, ಅವರಂತೆ ಕಾಣಲು ಡೈ ಕೂಡ ಮಾಡಿಸಿಕೊಂಡಿದ್ದಾನೆ. ಸಿಸಿಬಿ ವಿಚಾರಣೆಯಲ್ಲಿ ಒಂದೊಂದಾಗಿ ವಿಷಯಗಳು ಹೊರಬೀಳುತ್ತಿದ್ದಂತೆಯೇ, ಮಾಧ್ಯಮವರು ಸಲೂನ್ ಮಾಲೀಕ ರಾಮು ಬಳಿ ಹೋಗಿ ವಿವರ ಪಡೆದುಕೊಂಡಿದ್ದಾರೆ. ಇದು ಧನರಾಜ್ ಗೆ ಗೊತ್ತಾಗಿ ಅವನು ತನ್ನ ಸ್ನೇಹಿತ ನೂತನ್ ಎಂಬುವವನಿಂದ ರಾಮು ಫೋನ್ ಮಾಡಿಸಿ ಧಮ್ಕಿ ಹಾಕಿಸಿದ್ದಾನೆ. ರಾಮು ಮತ್ತು ನೂತನ್ ನಡುವೆ ನಡೆದ ಸಂಭಾಷನಣೆಯನ್ನು ಇಲ್ಲಿ ಕೇಳಬಹುದು. ಈ ವಿಡಿಯೋ ವೈರಲ್ ಆಗಿದ್ದು ಧನರಾಜ್ ಮತ್ತು ನೂತನ್ ಗೆ ಉಳಿಗಾಲವಿದ್ದಂತಿಲ್ಲ, ಯಾಕೆಂದರೆ ಪೊಲೀಸರು ಈಗಾಗಲೇ ಅವರ ಬೇಟೆಗಿಳಿದಿರುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕೊಣ್ಣೂರು ಕುಡುಕ ನದಿಗೆ ಹಾರುವ ಅಪಾಯಕಾರಿ ಸ್ಟಂಟ್ ಮಾಡಿಯೂ ಬಚಾವಾದ!
ಕೊಣ್ಣೂರು ಕುಡುಕ ನದಿಗೆ ಹಾರುವ ಅಪಾಯಕಾರಿ ಸ್ಟಂಟ್ ಮಾಡಿಯೂ ಬಚಾವಾದ!
ಮಾರುಕಟ್ಟೆಗೆ ಬಂತು ವಿಶೇಷ 3D ಶೂ, ಹೇಗಿದೆ ನೋಡಿ
ಮಾರುಕಟ್ಟೆಗೆ ಬಂತು ವಿಶೇಷ 3D ಶೂ, ಹೇಗಿದೆ ನೋಡಿ
ಮುಡಾ, ವಾಲ್ಮೀಕಿ ನಿಗಮ ಹಗರಣ: ಸಂಸತ್ ಭವನದ ಮುಂದೆ ಬಿಜೆಪಿ ಸಂಸದರ ಪ್ರತಿಭಟನೆ
ಮುಡಾ, ವಾಲ್ಮೀಕಿ ನಿಗಮ ಹಗರಣ: ಸಂಸತ್ ಭವನದ ಮುಂದೆ ಬಿಜೆಪಿ ಸಂಸದರ ಪ್ರತಿಭಟನೆ