AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MLA ticket cheating case: ನಕಲಿ ನಾಯಕರುಗಳ ಮಧ್ಯೆ ಒಮ್ಮೆ ಅಸಲಿ ಸಚಿವರನ್ನೇ ಭೇಟಿ ಮಾಡಿಸಿದ್ದ ಮಿಸ್​​ ಚೈತ್ರಾ ಕುಂದಾಪುರ, ಅಂದಿನ ಸಚಿವ ಸುನಿಲ್ ಕುಮಾರ್​ಗೆ ಇಂದು ಶಾಕ್​!

Chaitra Kundapura: ಅಂದು ವಿಷಯ ಏನೆಂದು ಅರಿಯದ ಸಚಿವ ಸುನಿಲ್ ಕುಮಾರ್ ಚೈತ್ರಾಳನ್ನು ಎಂದಿನಂತೆ ಸಹಜವಾಗಿ ಗುರುತಿಸಿ ಮಾತಾನಾಡಿಸಿದ್ದರು. ಆ ವೇಳೆಯೇ ಅಷ್ಟೋ ಇಷ್ಟೋ ಗೋವಿಂದ ಬಾಬು ಪೂಜಾರಿ ಬಗ್ಗೆ ಸಹ ಹೇಳಿದ್ದಳು ಮಿಸ್​ ಚೈತ್ರಾ. ಆದರೆ ಸುನಿಲ್ ಕುಮಾರ್ ಭೇಟಿ ಬಳಿಕ, ಅದಕ್ಕೆ ಬೇರೆ ಬಣ್ಣ ಬಳಿದು ಈ ಸಚಿವರೇ ಮುಂದೆ ಸಂಘ ಮತ್ತು ಪಕ್ಷದಲ್ಲಿ ಪ್ರಮುಖರು. ಅದಕ್ಕೆ ನಿಮ್ಮ ಟಿಕೆಟ್​​ಗಾಗಿ ಅವರನ್ನು ಭೇಟಿ ಮಾಡಿಸಿದ್ದು ಎಂದು ಮಿಸ್​ ಚೈತ್ರಾ ಬೂಸಿ ಬಿಟ್ಟಿದ್ದಳಂತೆ

MLA ticket cheating case: ನಕಲಿ ನಾಯಕರುಗಳ ಮಧ್ಯೆ ಒಮ್ಮೆ ಅಸಲಿ ಸಚಿವರನ್ನೇ ಭೇಟಿ ಮಾಡಿಸಿದ್ದ ಮಿಸ್​​ ಚೈತ್ರಾ ಕುಂದಾಪುರ, ಅಂದಿನ ಸಚಿವ ಸುನಿಲ್ ಕುಮಾರ್​ಗೆ ಇಂದು ಶಾಕ್​!
ಅಸಲಿ ಸಚಿವರನ್ನೇ ಭೇಟಿ ಮಾಡಿಸಿದ್ದ ಮಿಸ್​​ ಚೈತ್ರಾ ಕುಂದಾಪುರ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Sep 14, 2023 | 8:23 AM

Share

ಬೆಂಗಳೂರು, ಸೆಪ್ಟೆಂಬರ್​​ 14: ಪ್ರಮುಖ ರಾಜಕೀಯ ಪಕ್ಷದ ವತಿಯಿಂದ ಅಸೆಂಬ್ಲಿ ಟಿಕೆಟ್ ಆಮಿಷವೊಡ್ಡಿ ಯುವ ಉದ್ಯಮಿಯೊಬ್ಬರಿಗೆ (BJP ticket aspirant industrialist Govinda Babu for Byndoor assembly seat) ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿರುವ ಚೈತ್ರಾ ಕುಂದಾಪುರ (Hindutva activist Chaitra Kundapura) ಮತ್ತು ಗಗನ್ ಕಡೂರು ಜೋಡಿ ಬಾನಗಡಿಗಳು ನೂರೆಂಟು ಹೊರಬರುತ್ತಿವೆ. ಸಿಸಿಬಿ ವಿಚಾರಣೆಯಿಂದ ಸವಿಸ್ತಾರ ಮಾಹಿತಿ ಹೊರಬರುತ್ತಿದ್ದು, ಬಿಜೆಪಿ ಮತ್ತು ಆರ್ ಎಸ್ ಎಸ್ ಹೆಸರಿನಲ್ಲಿ ಸಂಪೂರ್ಣ ನಕಲಿ ನಾಯಕರುಗಳನ್ನು ಸೃಷ್ಟಿ ಮಾಡಿತ್ತು ಈ ಖತರನಾಕ್​​ ಜೋಡಿ. ಆಶ್ಚರ್ಯದ ಸಂಗತಿಯೆಂದರೆ ಈ ನಕಲಿಗಳ ಸೃಷ್ಟಿ ಭಾಗವಾಗಿ ಒಮ್ಮೆ ಅಸಲಿ ಸಚಿವರನ್ನೇ ಭೇಟಿ ಮಾಡಿದ್ದ ಮಿಸ್​​ ಚೈತ್ರಾ ಕುಂದಾಪುರ ಆ ಭೇಟಿಯನ್ನೇ ಅಸಲಿಯೆಂದು ಬಿಂಬಿಸಿಕೊಂಡಿದ್ದಳು. ಆದರೆ ಆ ಸಚಿವರಿಗೆ ಅದರ ಬಗ್ಗೆ ಸಣ್ಣ ಸುಳಿವೂ ಇರಲಿಲ್ಲ. ಎಂದಿನಂತೆ ಹತ್ತಾರು ಮಂದಿ ತಮ್ಮನ್ನು ಭೇಟಿ ಮಾಡುತ್ತಿರುತ್ತಾರೆ. ಅದರಲ್ಲಿ ಸ್ವಲ್ಪ ಪರಿಚಯವಿದ್ದ ಚೈತ್ರಾ ಕುಂದಾಪುರ ಸಹ ಅಂದು ಭೇಟಿಯಾಗಿರಬಹುದು. ಆದರೆ ಪ್ರಸ್ತುತ ಮೋಸ ಹೋಗಿರುವ ಗೋವಿಂದ ಬಾಬುಗೆ ಅಂದು ಆ ಭೇಟಿಯನ್ನೇ ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಮಿನಿಸ್ಟರ್ ಭೇಟಿಯನ್ನೇ ಅಸಲಿ ಎಂಬಂತೆ ಬಿಂಬಿಸಿದ್ದಳು ಮಿಸ್​​ ಚೈತ್ರಾ ( MLA ticket cheating case)!

ಅಂದು ಕ್ಯಾಬಿನೆಟ್ ಮಿನಿಸ್ಟರ್ ಸುನಿಲ್ ಕುಮಾರ್ ಮನೆಗೆ ಕರೆದುಕೊಂಡು ಹೋಗಿದ್ದ ಮಿಸ್​​ ಚೈತ್ರಾ, ನಾವು ನಿಮಗೆ ಖಂಡಿತಾ ಟಿಕೆಟ್ ಕೊಡಿಸುತ್ತೇವೆ ಎಂದು ಗೋವಿಂದ ಬಾಬುಗೆ ಬಿಂಬಿಸುವ/ ನಂಬಿಸುವ ಯತ್ನದಲ್ಲಿ ಇದು ಸಹ ಒಂದು ಭಾಗವಾಗಿತ್ತು ಎಂಬುದು ಈಗ ವಿಚಾರಣೆ ವೇಳೆ ತಿಳಿದುಬಂದಿದೆ. ಮಾಜಿ ಸಚಿವ ಸುನಿಲ್ ಕುಮಾರ್ ರನ್ನು ಭೇಟಿ ಮಾಡಿಸಿದ್ದ ಮಿಸ್​ ಚೈತ್ರಾ ತಮ್ಮ ಮೈನವಿರೇಳಿಸುವ ಭಾಷಣದಿಂದ ಬಿಜೆಪಿ ನಾಯಕರಿಗೆ ಪರಿಚಿತಳಾಗಿದ್ದಳು. ಹೀಗಾಗಿ ಆ ಪರಿಚಯವನ್ನೇ ದುರುಪಯೋಗ ಮಾಡಿಕೊಂಡಿರುವುದು ಈಗ ಬೆಳಕಿಗೆ ಬಂದಿದೆ.

ಅಂದು ವಿಷಯ ಏನೆಂದು ಅರಿಯದ ಸಚಿವ ಸುನಿಲ್ ಕುಮಾರ್ ಚೈತ್ರಾಳನ್ನು ಎಂದಿನಂತೆ ಸಹಜವಾಗಿ ಗುರುತಿಸಿ ಮಾತಾನಾಡಿಸಿದ್ದರು. ಆ ವೇಳೆಯೇ ಅಷ್ಟೋ ಇಷ್ಟೋ ಗೋವಿಂದ ಬಾಬು ಪೂಜಾರಿ ಬಗ್ಗೆ ಸಹ ಹೇಳಿದ್ದಳು ಮಿಸ್​ ಚೈತ್ರಾ. ಆದರೆ ಸುನಿಲ್ ಕುಮಾರ್ ಭೇಟಿ ಬಳಿಕ, ಅದಕ್ಕೆ ಬೇರೆ ಬಣ್ಣ ಬಳಿದು ಈ ಸಚಿವರೇ ಮುಂದೆ ಸಂಘ ಮತ್ತು ಪಕ್ಷದಲ್ಲಿ ಪ್ರಮುಖರು. ಅದಕ್ಕೆ ಅವರನ್ನು (ಸುನಿಲ್ ಕುಮಾರ್) ಭೇಟಿ ಮಾಡಿಸಿದ್ದು, ನಿಮ್ಮ ಬಗ್ಗೆ ಎಲ್ಲಾ ಹೇಳಿದ್ದೇನೆ, ಟೆಕೆಟ್ ಕೊಡಿಸಲು ಸಹ ಸಹಾಯ ಮಾಡ್ತಾರೆ ಎಂದು ಬೂಸಿ ಬಿಟ್ಟಿದ್ದಳು ಮಿಸ್​ ಚೈತ್ರಾ!

ಆದ್ರೆ ಸುನಿಲ್ ಕುಮಾರ್ ಅವರ ಅರಿವಿಗೆ ಈ ಯಾವ ವಿಚಾರಗಳು ಗಮನಕ್ಕೆ ಬಂದಿರಲಿಲ್ಲ. ಎಲ್ಲಾರಂತೆ ಅದು ಸಾಮಾನ್ಯ ಭೇಟಿಯಾಗಿತ್ತು. ಅವರ ಭೇಟಿ ಬಳಿಕ, ಅವರನ್ನೆಲ್ಲ ವಾಪಸ್ಸು ಕಳಿಸಿದ್ದರು ಸುನಿಲ್ ಕುಮಾರ್.

ಇದನ್ನೂ ಓದಿ: ಎಂಎಲ್​ಎ ಟಿಕೆಟ್​ ವಂಚನೆ: ಚೈತ್ರಾ ಕುಂದಾಪುರ ಸೆ. 23ರ ವರೆಗೆ ಸಿಸಿಬಿ ಕಸ್ಟಡಿಗೆ

ಇನ್ನು ವಿಚಾರಣೆ ವೇಳೆ ಈ ಹಿಂದೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಜೊತೆಗೆ ಮೋಸ್ಟ್ ಕಾಂಟ್ಯಾಕ್ಟ್ ಇದ್ದಿದ್ದು ಮುಸ್ಲಿಂ ಲೀಗ್ ಮಹಿಳಾ ಮುಖಂಡರಾದ ಅಜುಂ ಜೊತೆಗೆ. ಫೋನ್ ಕರೆಗಳ ಪರಿಶೀಲನೆ ಮಾಡಿದಾಗ್ಲೇ ಚೈತ್ರಾ ಕುಂದಾಪುರ ಅಸಲಿಯತ್ತು ಸಿಸಿಬಿಗೆ ಬಯಲಾಗಿರುವುದು. ಸೋಜಿಗದ ವಿಚಾರವೆಂದರೆ ತಮ್ಮ ರಣಭೀಕರ ಭಾಷಣಗಳಲ್ಲಿ ಮುಸ್ಲಿಂ ವಿರೋಧಿಯಾಗಿ/ ಹಿಂದೂಗಳ ಪರವಾಗಿ ಭಾಷಣ ಬಿಗಿಯುತ್ತಿದ್ದ ಮಿಸ್ ಚೈತ್ರಾ ವಾಸ್ತವದಲ್ಲಿ ಮುಸ್ಲಿಂ ಯುವತಿ ಜೊತೆಗೆ ಅತ್ಯಂತ ಹೆಚ್ಚು ಸಂಪರ್ಕ ಹೊಂದಿದ್ದಳು! ಹಣದ ವ್ಯವಹಾರ, ಆಶ್ರಯ ಪಡೆದಿರುವುದು ಸೇರಿ ಹಲವಾರು ವಿಚಾರಗಳಲ್ಲಿ ಚೈತ್ರಾಗೆ ಮುಸ್ಲಿಂ ಯುವತಿ ಸಹಾಯ ಮಾಡಿದ್ದಾಳೆ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?