Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಸರಣಿ ಅಪಘಾತ: ಕ್ಯಾಂಟರ್ ಚಲಿಸುತ್ತಿದ್ದ ವೇಗಕ್ಕೆ ಪ್ರಾಣಪಾಯ ಜರುಗದಿರುವುದೇ ಅದೃಷ್ಟ: ಪ್ರತ್ಯಕ್ಷದರ್ಶಿ

ಬೆಂಗಳೂರು ಸರಣಿ ಅಪಘಾತ: ಕ್ಯಾಂಟರ್ ಚಲಿಸುತ್ತಿದ್ದ ವೇಗಕ್ಕೆ ಪ್ರಾಣಪಾಯ ಜರುಗದಿರುವುದೇ ಅದೃಷ್ಟ: ಪ್ರತ್ಯಕ್ಷದರ್ಶಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 15, 2025 | 11:09 AM

ನಗರಪ್ರದೇಶಗಳಲ್ಲಿ ಸರಣಿ ಅಪಘಾತ ನಡೆದಾಗ ಹೆಚ್ಚು ಹಾನಿಗೊಳಗಾಗೋದು ಆಟೋರಿಕ್ಷಾಗಳು ಅನ್ನೋದು ಸುಳ್ಳಲ್ಲ. ಅವರ ಕುಟುಂಬಗಳು ನಡೆಯೋದು ದಿನದ ಸಂಪಾದನೆಯಿಂದ. ಬೆಳಗಿನ ಜಾವವೇ ಆಟೋರಿಕ್ಷಾ ಅಪಘಾತಕ್ಕೊಳಗಾಗಿ ಗ್ಯಾರೇಜಿಗೆ ಬಂದರೆ ಅವತ್ತಿನ ಸಂಪಾದನೆ ಖೋತಾ. ಕುಡುಕ ಚಾಲಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.

ಬೆಂಗಳೂರು, 15 ಮಾರ್ಚ್: ಪ್ರತ್ಯಕ್ಷದರ್ಶಿಗಳು (eyewitness) ಹೇಳುವ ಪ್ರಕಾರ ಇಂದು ಬೆಳಗಿನ ಜಾವ ಬೆಂಗಳೂರಿನ ಸ್ಯಾಟೆಲೈಟ್ ಬಸ್ ನಿಲ್ದಾಣದ ಬಳಿ ನಡೆದ ಸರಣಿ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಜರುಗದಿರುವುದೇ ಅದೃಷ್ಟ. ಅಪಘಾತ ಮಾಡಿದ ಕ್ಯಾಂಟರ್ ಚಾಲಕ ಕುಡಿದಿದ್ದ ಮತ್ತು ಸುಮಾರು 100 ಕಿಮೀ/ಗಂಟೆ ವೇಗದಲ್ಲಿ ವಾಹನವನ್ನು ಓಡಿಸುತ್ತಿದ್ದ. ಅವನು ವಾಹನ ಓಡಿಸುತ್ತಿದ್ದ ರಭಸಕ್ಕೆ ಡಿವೈಡರ್ ಗಳು ಸಹ ಕಿತ್ತುಹೋಗಿವೆ ಎಂದು ಭಯಾನಕ ದೃಶ್ಯವನ್ನು ಕಣ್ಣಾರೆ ನೋಡಿದ ಆಟೋರಿಕ್ಷಾ ಚಾಲಕರು ಹೇಳುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಾಗಲಕೋಟೆ: ಸರಣಿ ಅಪಘಾತದಲ್ಲಿ ಮೂವರ ಸಾವು

Published on: Mar 15, 2025 11:09 AM