AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂರ್ಲಬ್ಬಿ ಜಲಪಾತದಲ್ಲಿ ಯುವಕರ ತಂಡದ ಹುಚ್ಚಾಟಗಳು, ಅಪಾಯಕಾರಿ ಅಂತ ಗೊತ್ತಿದ್ದರೂ ಸಾಹಸಗಳು

ಸೂರ್ಲಬ್ಬಿ ಜಲಪಾತದಲ್ಲಿ ಯುವಕರ ತಂಡದ ಹುಚ್ಚಾಟಗಳು, ಅಪಾಯಕಾರಿ ಅಂತ ಗೊತ್ತಿದ್ದರೂ ಸಾಹಸಗಳು

ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on:Jun 11, 2025 | 9:18 AM

Share

ಜಲಪಾತಗಳು ಪ್ರಕೃತಿ ನಮಗೆ ಕೊಡಮಾಡುವ ಅತ್ಯಂತ ಸುಂದರ ದೃಶ್ಯಗಳು, ಇವುಗಳನ್ನು ನೋಡಿ ಆನಂದಿಸಬೇಕೇ ಹೊರತು ಅವುಗಳ ಹತ್ತಿರ ಹೋಗಿ ಕುಶಲೋಪರಿ ನಡೆಸುವ ಪ್ರಯತ್ನ ಮಾಡಬಾರದು. ಆದರೆ ಯುವಕ ಯುವತಿಯರಿಗೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು, ಫೋಟೋ ತೆಗೆಸಿಕೊಳ್ಳಲು ಇಂಥ ಸ್ಥಳಗಳೇ ಬೇಕು. ಯಾಮಾರಿದರೆ ಅಪಾಯ ಅಂತ ಗೊತ್ತಿದ್ದರೂ ಸಾಹಸ ಮಾಡೋದನ್ನು ಬಿಡಲಾರರು.

ಮಡಿಕೇರಿ, ಜೂನ್ 10: ದುಸ್ಸಾಹಸ ಬೇಡ, ನೀರಿನೊಂದಿಗೆ ಚೆಲ್ಲಾಟವಾಡಬೇಡಿ, ಜಲಪಾತವಿರುವ (waterfalls) ಕಡೆ ಕಲ್ಲುಬಂಡೆಗಳು ಜಾರುತ್ತವೆ ಹತ್ತಿರ ಹೋಗಬೇಡಿ ಅಂತ ಬುದ್ಧಿವಂತರು ಎಷ್ಟು ಬೊಬ್ಬೆ ಹಾಕಿದರೂ ಮೂರ್ಖರಿಗೆ ಅದು ಅರ್ಥವಾಗಲಾರದು. ಇಲ್ನೋಡಿ, ಯುವಕ-ಯುವತಿಯರ ಗುಂಪೊಂದು ಜಿಲ್ಲೆಯ ಸೋಮವಾರಪೇಟೆಗೆ ಹತ್ತಿರವಿರುವ ಸೂರ್ಲಬ್ಬಿ ಜಲಪಾತಕ್ಕೆ ಬಂದಿದೆ. ರಜಾ ಅಥವಾ ಬಿಡುವಿನ ಸಮಯದಲ್ಲಿ ಜನ ಹೀಗೆಲ್ಲ ಸುತ್ತಾಡುತ್ತಾರೆ ಅದು ಬೇರೆ ವಿಷಯ. ಅದರೆ ಜಲಪಾತಗಳು ಇರುವೆಡೆ ಹೀಗೆ ನೀರಿಗಿಳಿಯೋದು, ನೀರು ಹರಿಯುವ ಬಂಡೆಗಳ ಮೇಲಿಂದ ಒಂದು ಕಡೆಯಿಂದ ಮತ್ತೊಂದು ಬದಿಗೆ ಹೋಗೋದು ಅಪಾಯಕ್ಕೆ ಆಹ್ವಾನವಿತ್ತಂತೆ.

ಇದನ್ನೂ ಓದಿ: ಜಲಪಾತಗಳಿಗೆ ಜೀವ ಕಳೆ ತಂದ ಮುಂಗಾರು: ಪ್ರವಾಸಿಗರನ್ನ ಸೆಳೆಯುತ್ತಿದೆ ಮಾಗೋಡು ಫಾಲ್ಸ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 10, 2025 08:32 PM
Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More